ತಂಗಿಯ ತಲೆಗೆ ಕತ್ತಿಯಿಂದ ಹೊಡೆದ ಅಣ್ಣ ಪರಾರಿ

ಕಾರವಾರ: ಬೇರೊಬ್ಬನನ್ನು ಪ್ರೀತಿಸಿದ್ದ ಕಾರಣಕ್ಕೆ ತಂಗಿಯ ಮೇಲೆ ಅಣ್ಣನೊಬ್ಬ ಕತ್ತಿಯಿಂದ ತಲೆ ಹಾಗೂ ಬೆನ್ನಿನ ಭಾಗಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಉಲ್ಲಾಪುರ ತಾಲೂಕಿನ ಅರೆಬೈಲ್ ನಲ್ಲಿ ನೆಡೆದಿದೆ.

ದಾಮೋದರ್ ಸುಬ್ರಹ್ಮಣ್ಯ ಶಟ್ಟಿ ಸಹೋದರಿಯಾದ ಮೇನಕಾ ಶಿವರಾಮ್ ಶಟ್ಟಿ (24) ಮೇಲೆ ಹಲ್ಲೆ ಮಾಡಿದ್ದಾನೆ.

ಅರೆಬೈಲ್ ಗ್ರಾಮದ ನಾಯ್ಡು ಎಂಬುವರನ್ನ ಮೇನಕಾ ತುಂಬಾ ಪ್ರೀತಿಸುತ್ತಿದ್ದಳು. ಹೀಗಾಗಿ ಈಕೆಯ ಚಿಕ್ಕಪ್ಪನ ಮಗನಾದ ದಾಮೋದರ್ ಆ ವ್ಯಕ್ತಿಯನ್ನ ನೀನು ಪ್ರೀತಿ ಮಾಡಬಾರದು ಎಂದು ಹೇಳಿದ್ದ. ಈ ವಿಚಾರದ ಬಗ್ಗೆ ಶುಕ್ರವಾರ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಮೇನಕ ತನ್ನ ಮಾತಿಗೆ ವಿರೋಧ ವಕ್ತಪಡಿಸಿದ್ದಕ್ಕೆ ಕೋಪಗೊಂಡು ಈಕೆಯ ಮೇಲೆ ಕತ್ತಿಯಿಂದ ತಲೆ ಹಾಗೂ ಬೆನ್ನಿನ ಭಾಗಕ್ಕೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ತೀವ್ರ ಗಾಯಗೊಂಡಿದ್ದ ಮೇನಕಾನನ್ನ ಯಲ್ಲಾಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *