ಸುಮಲತಾ ಟೀಕಾಕಾರರ ವಿರುದ್ಧ ನಟಿ ಶೃತಿ ಕೆಂಡಾಮಂಡಲ

ಹಾವೇರಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಯಶ್ ಮೇಲಿನ ಅಭಿಮಾನದಿಂದ ಜನ ಬಂದಿದ್ದಾರೆ. ಇದರಿಂದ ಭಯಗೊಂಡು ಈ ರೀತಿ ಅವರೆಲ್ಲ ಮತನಾಡುತ್ತಿದ್ದಾರೆ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾರನ್ನು ಟೀಕಿಸುವವರ ವಿರುದ್ಧ ನಟಿ, ಬಿಜೆಪಿ ಮುಖಂಡೆ ಶೃತಿ ಕಿಡಿಕಾರಿದ್ದಾರೆ.

ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ಸಂಸದ ಪ್ರಹ್ಲಾದ ಜೋಶಿ ಪರ ಪ್ರಚಾರ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಸ್ಟಾರ್‍ಗಳು ಮಂಡ್ಯ ಪ್ರಚಾರಕ್ಕೆ ಬಂದ್ರೆ ಸೇರಿದ ಜನಸಾಗರ ನೋಡಿ ಜೆಡಿಎಸ್‍ನವರಿಗೆ ಭಯ ತಂದಿದ್ದಾರೆ. ಜೆಡಿಎಸ್ ಪಕ್ಷದವರು ದುಡ್ಡುಕೊಟ್ಟು ಜನರನ್ನು ನಟರ ಮೇಲಿನ ಅಭಿಮಾನದಿಂದ ಜನ ಬಂದಿದ್ದಾರೆ ಎಂದರು.

ಸುಮಲತಾ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಒಬ್ಬ ಮಹಿಳೆಗೆ ಇಷ್ಟೊಂದು ವೈಯಕ್ತಿಕವಾಗಿ ಟೀಕೆ ಮಾಡುವುದನ್ನು ಯಾರು ಕ್ಷಮಿಸೋದಿಲ್ಲ. ಸುಮಲತಾ ಜನರ ಧ್ವನಿಯಾಗುವ ಸಲುವಾಗಿ ತನ್ನ ನೋವಿನಲ್ಲೂ ರಾಜಕಾರಣಕ್ಕೆ ಬಂದಿದ್ದಾರೆ. ಮಹಿಳೆಯನ್ನು ಮುಖ್ಯವಾಹಿನಿಗೆ ತಂದು, ಬೆಳೆಸುವಂತಹ ಕೆಲಸ ಮಾಡಬೇಕು. ಆದರೆ ಸಿಎಂ ಕುಮಾರಸ್ವಾಮಿ ತನ್ನ ಮಗನ ಗೆಲುವಿಗಾಗಿ ವೈಯಕ್ತಿಕ ಟೀಕೆ ಮಾಡುವುದು ತಪ್ಪು ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಖದಲ್ಲಿ ನೋವು ಕಾಣ್ತಿಲ್ಲ ಅನ್ನೋ ಕುಮಾರಸ್ವಾಮಿಹಾಗೂ ಗಂಡ ಸತ್ತು ನಾಲ್ಕೈದು ದಿನ ಆಗಲಿಲ್ಲ ಅನ್ನೋ ಸಚಿವ ಎಚ್ ಡಿ ರೇವಣ್ಣ ಹೇಳಿಕೆ ಇಬ್ಬರಿಗೂ ಶೋಭೆ ತರೋದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ರು.

Comments

Leave a Reply

Your email address will not be published. Required fields are marked *