ರಾಹುಲ್‍ಗಾಂಧಿ ದಲಿತರನ್ನು ಮದ್ವೆಯಾಗ್ಲಿ, ಹೆಣ್ಣು ಕೊಡಲು ನಾವು ಸಿದ್ಧ- ಸಿಎಂಗೆ ಕಾರಜೋಳ ಸವಾಲ್

ಬೆಂಗಳೂರು: ರಾಹುಲ್ ಗಾಂಧಿಗೆ ನಾವು ಹೆಣ್ಣು ಕೋಡ್ತೀವಿ, ನೀವು ರಾಹುಲ್ ಗಾಂಧಿಯನ್ನು ಒಪ್ಪಿಸಿ ಮದುವೆ ಮಾಡಿಸ್ತೀರಾ ಎಂದು ಪ್ರಶ್ನಿಸಿ ಬಿಜೆಪಿಯ ಮಾಜಿ ಸಚಿವ ಗೋವಿಂದ ಕಾರಜೋಳ ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ಹೆಣ್ಣು ಕೊಡಲು ಸಿದ್ಧರಿದ್ದೇವೆ. ಸಂಬಂಧ ಬೆಳಸಲು ಸೋನಿಯಾ ಗಾಂಧಿ ರೆಡಿ ಇದ್ದಾರೆಯೇ? ಸೋನಿಯಾ ಗಾಂಧಿ ದಲಿತರ ಜೊತೆ ಸಂಬಂಧ ಬೆಳೆಸಿದ್ರೆ ಸಾಷ್ಟಾಂಗ ನಮಸ್ಕಾರ ಹಾಕುತ್ತೇನೆ ಎಂದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವುದೇ ದಲಿತ ಕುಟುಂಬದ ಸಂಬಂಧ ಬೆಳೆಸಿದರೆ ನಾವು ಕನ್ಯೆ ಕೊಡಲು ಸಿದ್ಧರಿದ್ದೇವೆ ಎಂದಿರುವ ಅವರು, ಯಡಿಯೂರಪ್ಪನವರಿಗೂ ಈ ಮಾತನ್ನು ಹೇಳುತ್ತಿದ್ದೆವು. ಆದ್ರೆ ಅವರ ಮಕ್ಕಳಿಗೆ ಮದುವೆ ಆಗಿದೆ. ರಾಹುಲ್ ಗಾಂಧಿ ಇನ್ನು ಬ್ಯಾಚುಲರ್ ಇದ್ದಾರೆ. ಹಾಗಾಗಿ ಅವರೇ ಸಂಬಂಧ ಬೆಳೆಸಲಿ. ಇದಕ್ಕೆ ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮಧ್ಯಸ್ಥಿಕೆ ವಹಿಸಲಿ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ದಲಿತರ ಮನೆಗೆ ತೆರಳಿ ಭೋಜನ ಸೇವಿಸಿದ ಹಿನ್ನೆಲೆಯಲ್ಲಿ ಸಿಎಂ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಇದನ್ನ ಟೀಕಿಸಿದ್ದರು. ಕೇವಲ ದಲಿತರ ಮನೆಯಲ್ಲಿ ಊಟ ಮಾಡಿ ಬರುವುದಲ್ಲ. ಅವರ ಜೊತೆಗೆ ಸಂಬಂಧವನ್ನು ಬೆಳಸಿ ಅಂತಾ ಕಿಚಾಯಿಸಿದ್ರು. ಇದಕ್ಕೆ ಟಾಂಗ್ ನೀಡಿದ ಮಾಜಿ ಸಚಿವ ಕಾರಜೋಳ ಈಗ ಸವಾಲು ಹಾಕಿದ್ದಾರೆ.

Comments

Leave a Reply

Your email address will not be published. Required fields are marked *