ಮಳವಳ್ಳಿ ರೈತನ ಮೇಲೆ ಚಿರತೆ ದಾಳಿ-ಗಾಮಸ್ಥರಲ್ಲಿ ಆತಂಕ

ಮಂಡ್ಯ: ಹಾಡುಹಗಲೇ ರೈತರೊಬ್ಬರ ಮೇಲೆ ಚಿರತೆಯೊಂದು ದಾಳಿ ಮಾಡಿದ ಘಟನೆ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಚಂದಹಳ್ಳಿಯಲ್ಲಿ ನಡೆದಿದೆ.

ರೈತ ದೊಡ್ಡಯ್ಯ (65) ಚಿರತೆ ದಾಳಿಗೆ ಒಳಗಾದವರು. ಅವರು ಕುರಿ ಮೇಸುತ್ತಿದ್ದ ವೇಳೆ ಚಿರತೆಯೊಂದು ದಾಳಿ ಮಾಡಿದ್ದು, ಭಯದಿಂದ ಕಿರುಚಿಕೊಂಡಿದ್ದಾರೆ. ಶಬ್ಧ ಕೇಳುತ್ತಿದ್ದಂತೆ ನೆರೆಹೊರೆಯ ಹೊಲದ ರೈತರು ತಕ್ಷಣವೇ ಬಂದು ಚಿರತೆಯನ್ನು ಓಡಿಸಿದ್ದಾರೆ.

ದಾಳಿಗೆ ಒಳಗಾದ ರೈತ ದೊಡ್ಡಯ್ಯ ಅವರಿಗೆ ಕೈ, ಕಾಲು ಸೇರಿದಂತೆ ಹಲವೆಡೆ ಗಾಯಗಳಾಗಿದ್ದು, ಮಳವಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿರತೆ ದಾಳಿಯು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.

Comments

Leave a Reply

Your email address will not be published. Required fields are marked *