ಬುರಾರಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ: ಈಗ ಕುಟುಂಬದ ಸಾಕು ನಾಯಿಯೂ ಸಾವು

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಬುರಾರಿ ಕುಟುಂಬದ 11 ಸದಸ್ಯರ ನಿಗೂಢ ಸಾವಿನಿಂದ ಆಘಾತಕ್ಕೊಳಗಾಗಿದ್ದ ಬುರಾರಿ ಕುಟುಂಬದ ಸಾಕು ನಾಯಿ ಟಾಮಿಯು ಕೂಡ ಇದೀಗ ಸಾವನ್ನಪ್ಪಿದೆ.

ಬುರಾರಿ ಕುಟುಂಬದ ಸದಸ್ಯರು ಸಾವನ್ನಪ್ಪಿದ್ದ ವೇಳೆ ಪೊಲೀಸರು ಪರಿಶೀಲನೆ ನಡೆಸುತ್ತಿರುವಾಗ ಮನೆಯ ಮೇಲೆ ಶ್ವಾನ `ಟಾಮಿ’ಯನ್ನು ಕಟ್ಟಿಹಾಕಿದ್ದರು. ಸಾಕಲು ಯಾರು ಇಲ್ಲದ ಕಾರಣ ತೀವ್ರ ಜ್ವರದಿಂದ ಬಳಲುತ್ತಿದ್ದ ಟಾಮಿಯನ್ನು ಶ್ವಾನ ಪ್ರಿಯ ಸಂಜಯ್ ಅಮೋಹಪಾತ್ರ ಅವರು ತೆಗೆದುಕೊಂಡು ಹೋಗಿ ಸಾಕುತ್ತಿದ್ದರು.

ಶ್ವಾನಪ್ರಿಯರಾದ ಸಂಜಯ್ ಮೋಹಪಾತ್ರರು ಬುರಾರಿ ಕುಟುಂಬದಿಂದ ತರಲಾಗಿದ್ದ ಟಾಮಿಯನ್ನು ವೈದ್ಯರ ಬಳಿ ತೋರಿಸಿ, ಚೆನ್ನಾಗಿ ಆರೈಕೆ ಮಾಡಿದ್ದರು. ಅಲ್ಲದೆ ಟಾಮಿಯು ಸಹ ಕ್ರಮೇಣವಾಗಿ ತನ್ನ ತೂಕವನ್ನೂ ಹೆಚ್ಚಿಸಿಕೊಂಡಿತ್ತು. ಭಾನುವಾರ ಸಂಜೆ 4 ಗಂಟೆಗೆ ಆಹಾರ ಸೇವಿಸಿದ್ದ ಟಾಮಿ, ವಾಕಿಂಗ್ ಸಹ ಮಾಡಿತ್ತು. ಆದರೆ, ಇದಾದ ಬಳಿಕ ಮರಳಿ ಕರೆ ತರುತ್ತಿದ್ದ ವೇಳೆ ಗೇಟ್ ಬಳಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಕೂಡಲೇ ಟಾಮಿಯನ್ನು ಪಶು ವೈದ್ಯರ ಬಳಿ ಸಂಜಯ್ ಕರೆದುಕೊಂಡು ಹೋಗಿದ್ದಾರೆ.

ಟಾಮಿಯನ್ನು ವೈದ್ಯರು ಪರೀಕ್ಷೆ ನಡೆಸಿದ ಬಳಿ ನಾಯಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದೆ ಎಂದು ಹೇಳಿದ್ದಾರೆ. ನಾಯಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ನೊಯ್ಡಾ ಮೂಲದ ಪ್ರಾಣಿಗಳ ಹೋರಾಟಗಾರ ಸಂಜಯ್ ಮೋಹಪಾತ್ರ ಟಾಮಿಯ ಸಾವಿನಿಂದ ಬೇಸರವಾಗಿದೆ. ಅದು ನಮ್ಮ ಮನೆಯ ಸದಸ್ಯನಂತೆ ಇತ್ತು ಎಂದು ಹೇಳಿದ್ದಾರೆ.

ಮೋಕ್ಷ ಪಡೆಯುವ ಸಲುವಾಗಿ ಬುರಾರಿ ಕುಟುಂಬದ 11 ಜನ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದರು. ಈ ವೇಳೆ ನಾಯಿಯನ್ನು ಮನೆ ಮೇಲೆ ಕಟ್ಟಿಹಾಕಿದ್ದರು.

Comments

Leave a Reply

Your email address will not be published. Required fields are marked *