ಯಾವ ಒತ್ತಡಕ್ಕೆ ಮಣಿಯುವ ಜಾಯಮಾನದ ಹೆಣ್ಣು ಮಗಳಲ್ಲ – ಗುಡುಗಿದ ಲಕ್ಷ್ಮಿ ಹೆಬ್ಬಾಳ್ಕರ್

ಬಾಗಲಕೋಟೆ: ನಾನು ಶಾಸಕಿಯಾದ ತಕ್ಷಣ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನವನ್ನ ಬೇರೆಯವರಿಗೆ ಕೊಡಿ ಎಂದು ಪತ್ರ ಬರೆದಿದ್ದೆ ಎಂದು ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಜಿಲ್ಲೆಯ ಮುಧೋಳ ನಗರದಲ್ಲಿ ಮಾತನಾಡಿದ ಅವರು, ಲಕ್ಷ್ಮೀ ಹೆಬಾಳ್ಕರ್ ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡುತ್ತಾಳೆ. ಯಾವುದೇ ಪ್ರಭಾವ ಅಥವಾ ಪ್ರಭಾವಿ ವ್ಯಕ್ತಿಯ ಒತ್ತಡಕ್ಕೆ ಮಣಿಯುವಂತಹ ಹೆಣ್ಣು ಮಗಳಲ್ಲ. ನಾನು ಪಕ್ಷದ ಮಹಿಳಾ ಘಟಕದ ಜವಾಬ್ದಾರಿ ವಹಿಸಿದ ವೇಳೆ ರಾಜ್ಯದಲ್ಲಿ ಹೈಕಮಾಂಡ್‍ಗೆ 3 ಮಹಿಳೆಯರ ಹೆಸರು ಕಳಿಸಲು ಕಷ್ಟದ ಪರಿಸ್ಥಿತಿ ಇತ್ತು. ಆದರೆ ನನ್ನ ಮೊದಲ ಭಾಷಣದಲ್ಲಿ ಪಕ್ಷದ ಸ್ಥಾನದಿಂದ ಕೆಳಗಿಳಿಯುವ ವೇಳೆಗೆ ನನ್ನಂತ 20 ಮಂದಿ ಮಹಿಳೆಯನ್ನು ತಯಾರು ಮಾಡುವುದಾಗಿ ಹೇಳಿದ್ದೆ. ಅದರಂತೆ ತಯಾರು ಮಾಡಿ ಅವರನ್ನು ಹೈಕಮಾಂಡ್ ಬಳಿ ಸಂದರ್ಶನಕ್ಕೂ ಕಳುಹಿಸಿಕೊಟ್ಟಿದ್ದೆ. ಆದರೆ ಮಾಧ್ಯಮಗಳು ಲಕ್ಷ್ಮೀ ಹೆಬಾಳ್ಕರ್ ವಿರುದ್ಧ ದೂರು ನೀಡಲು ತೆರಳಿದ್ದಾರೆ ಎಂದು ವರದಿ ಮಾಡಿದ್ದವು. ಇದೆಲ್ಲಾ ಸುಳ್ಳು ಎಂದು ಸ್ಪಷ್ಟಪಡಿಸಿದರು.

ಪಕ್ಷದಲ್ಲಿ ನಡೆಯುವ ಯಾವುದೇ ಬೆಳಣಿಗೆಗೆ ನನ್ನ ಹಾಗೂ ಜಾರಕಿಹೊಳಿ ಅವರ ಹೆಸರನ್ನು ಪ್ರಸ್ತಾಪ ಮಾಡಬೇಡಿ. ಏಕೆಂದರೆ ಇಬ್ಬರ ನಡುವೆ ಇದ್ದ ಅಸಮಾಧಾನ ಸದ್ಯ ಮುಗಿದ ಅಧ್ಯಾಯ. ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆಯಾಗಿ 3 ತಿಂಗಳು ಕಳೆದರೆ 4 ವರ್ಷ ಪೂರ್ಣಗೊಳ್ಳುತ್ತದೆ. ಅದ್ದರಿಂದ ನಾನು ಕಳುಹಿಸಿದ 20 ಮಹಿಳೆಯಲ್ಲಿ 5 ಮಂದಿ ಆಯ್ಕೆಯ ರೇಸ್‍ನಲ್ಲಿದ್ದಾರೆ. ಇದರಲ್ಲಿ ಇರುವ 5 ಜನರಲ್ಲಿ ಒಬ್ಬರು ಆಯ್ಕೆ ಆಗುತ್ತಾರೆ ಅಥವಾ ಬೇರೆಯವರು ಕೂಡ ಆಯ್ಕೆ ಮಾಡಬಹುದು ಎಂದು ಸ್ಪಷ್ಟಪಡಿಸಿದರು.

ಜಮಖಂಡಿ ಉಪಚುನಾವಣಾ ಪ್ರಚಾರ ಹಾಗೂ ಕಾರ್ಯತಂತ್ರ ಕುರಿತು ಇಂದು ಸಭೆ ನಡೆಯಿತು. ಚುನಾವಣೆಯ ದಿನ ಯಾರು ಯಾವ ಕರ್ತವ್ಯ ಮಾಡಬೇಕು ಎಂದು ಚರ್ಚೆ ನಡೆಸಲಾಯಿತು. ಪಕ್ಷದ ಪ್ರಮುಖ ಸಭೆ ಅದ್ದರಿಂದ ಇಲ್ಲಿ ಭಾಗವಹಿಸಲಾಯಿತು ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *