ಜಾತ್ರೆಗೆ ಬಂದವ ಕರೆಯಲ್ಲಿ ಈಜಲು ಹೋಗಿ ಮಸಣ ಸೇರಿದ

ಬೆಳಗಾವಿ(ಚಿಕ್ಕೋಡಿ): ಜಾತ್ರೆಯ ಅಂಗವಾಗಿ ಅಜ್ಜಿಯ ಮನೆಗೆ ಬಂದಿದ್ದ ಯುವಕ ಕೆರೆಯಲ್ಲಿ ಈಜಲು ಹೋಗಿ ನೀರುಪಾಲಾದ ದುರ್ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಾಡವಾಡಿ ಗ್ರಾಮದಲ್ಲಿ ನಡೆದಿದೆ.

ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದ ಯುವಕ ಮದುಕರ ಮಾಳಗಿ(17) ಕಳೆದ ಎರಡು ದಿನದ ಹಿಂದೆ ಅಜ್ಜಿಯ ಊರಾದ ಮಾವನೂರ ಗ್ರಾಮಕ್ಕೆ ಜಾತ್ರೆಯ ನಿಮಿತ್ಯ ಬಂದಿದ್ದನು. ಮುಂಜಾನೆ ಸ್ನೇಹಿತರೊಡನೆ ಪಕ್ಕದ ಬಾಡವಾಡಿ ಗ್ರಾಮದ ಕೆರೆಗೆ ಸ್ನಾನಕ್ಕೆ ತೆರೆಳಿದ್ದನು. ಸ್ನೇಹಿತರು ಈಜುವುದನ್ನು ನೋಡಿ ತಾನು ಈಜಲು ಹೋಗಿದ್ದ ಯುವಕ ಈಜು ಬಾರದೆ ಕೆರೆಯಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ.

ಯುವಕ ಮುಳುಗಿರುವುದನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿ ಶಾಮಕ ದಳ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಮುಳುಗಿದ್ದ ಯುವಕನ ರಕ್ಷಣಾ ಕಾರ್ಯಾಚರಣೆಗೆ ಮುಂದಾದರು. ಆದರೆ 2 ದಿನ ಶೋಧದ ಬಳಿಕ ಇಂದು ಮಧ್ಯಾಹ್ನ ಯುವಕನ ಮೃತದೇಹ ಪತ್ತೆಯಾಗಿದ್ದು, ಕೆರೆಯಿಂದ ಶವ ಹೊರತೆಗೆಯಲಾಗಿದೆ. ಈ ಸಂಬಂಧ ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *