ನನ್ನ ಪತ್ನಿಯನ್ನು ಹುಡುಕಿಕೊಡಿ- ಬೆಂಗಳೂರು ಪೊಲೀಸರಿಗೆ ಛತ್ತಿಸ್‌ಗಢ ವ್ಯಕ್ತಿ ದೂರು

ಬೆಂಗಳೂರು: ತನ್ನ ಪತ್ನಿ ಕಿಡ್ನಾಪ್ (Kidnap) ಆಗಿದ್ದಾಳೆ. ಆಕೆಯನ್ನು ರಕ್ಷಣೆ ಮಾಡಿ ಹುಡುಕಿಕೊಡಿ ಎಂದು ಛತ್ತಿಸ್‌ಗಢದ (Chhattisgarh) ವ್ಯಕ್ತಿಯೋರ್ವ ಟ್ವಿಟ್ಟರ್‌ನಲ್ಲಿ (Twitter) ಬೆಂಗಳೂರು  ಪೊಲೀಸರನ್ನು ಟ್ಯಾಗ್ ಮಾಡಿ ದೂರು ನೀಡಿದ್ದಾರೆ.

ಛತ್ತಿಸ್‌ಗಢದ ಕುಂಟಾಲ್ ಬ್ಯಾನರ್ಜಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬೆಂಗಳೂರು (Bengaluru) ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ನನ್ನ ಪತ್ನಿಯನ್ನು ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತಂದಿದ್ದಾನೆ. ಪತ್ನಿಯನ್ನು ರಕ್ಷಣೆ ಮಾಡಿ ಹುಡುಕಿಕೊಡಿ ಎಂದು ಆರೋಪಿ ಅವಿನಭಾ ಚರ್ಕವರ್ತಿಯ ಫೋಟೋದೊಂದಿಗೆ ಆತನ ಮೊಬೈಲ್ ನಂಬರನ್ನು ದೂರಿನಲ್ಲಿ ನೀಡಿದ್ದಾರೆ. ಇದನ್ನೂ ಓದಿ: ಕಿರುಚಿತ್ರ ತಯಾರಕರಿಗೆ ವೇದಿಕೆ ಕಲ್ಪಿಸಿದ ಖ್ಯಾತ ಸಿನಿಮಾಟೋಗ್ರಾಫರ್ ಸತ್ಯ ಹೆಗಡೆ

ಈ ದೂರಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: Oscars- ‘ಆಸ್ಕರ್’ ವಿಜೇತರಿಗೆ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ

Comments

Leave a Reply

Your email address will not be published. Required fields are marked *