ನಾನು ಜೈಲಿಗೆ ಹೋಗ್ತೀನಿ ಅಂತ ಕುಮಾರಸ್ವಾಮಿ ಹೇಳ್ತಿದಾರೆ, ಇದಕ್ಕೆ ಕೊನೆ ಹಾಡಲೇಬೇಕು: ಡಿಕೆಶಿ

ಬೆಂಗಳೂರು: ನಾನು ಜೈಲಿಗೆ ಹೋಗುವ ದಿನ ದೂರವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy) ಹೇಳುತ್ತಿದ್ದಾರೆ. ಇದಕ್ಕೆ ಕೊನೆ ಹಾಡಲೇಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಾಪ ನನ್ನ ಜೈಲಿಗೆ ಕಳಿಸೋಕೆ ನೋಡುತ್ತಿದ್ದಾರೆ. ಅವರಿಗೆ ಜೈಲಿಗೆ ಕಳಿಸೋ ಆಸೆ ಇರಬಹುದು. ಅದಕ್ಕಾಗಿ ಅವರು ಏನೇನೋ ಮಾಡುತ್ತಿರಬಹುದು. ಈಗ ಹಬ್ಬ ಇದೆ, ಮುಗಿಯಲಿ ಮಾತನಾಡುತ್ತೇನೆ. ಅವರ ಆಸೆ ಏನೇನು ಇದೆಯೋ ಗೊತ್ತಿಲ್ಲ. ಜೈಲಿಗೆ ಹೋಗುವ ದಿನ ಹತ್ತಿರ ಬರುತ್ತಿದೆ ಅಂದಿದ್ದಾರೆ. ನಾನು ಅವರಿಗೆ ಉತ್ತರ ಕೊಡುತ್ತೇನೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಅಕ್ಟೋಬರ್‌ ಕ್ರಾಂತಿ – ಅಶೋಕ್, ಸುನಿಲ್ ಕುಮಾರ್ ಭವಿಷ್ಯ

 

ಇದಕ್ಕೆ ಕೊನೆ ಹಾಡಲೇಬೇಕು. ಯಾವುದಾದರೂ ಚಾನಲ್ ಡಿಬೇಟ್ ಕರೆಯಿರಿ. ಹಿಂದೆಯೂ ಬಹಳ ಸಾರಿ ನಾನು ಆಹ್ವಾನ ಕೊಟ್ಟಿದ್ದೇನೆ. ನಾನು ಅಸೆಂಬ್ಲಿಯಲ್ಲೇ ಕರೆದಿದ್ದೆ. ಅವರು ಲೋಕಸಭೆಗೆ ಹೋದರು. ನಾನು ಹಿಟ್ ಅಂಡ್ ರನ್ ಮಾಡೋನಲ್ಲ. ಅವರ ಕುಟುಂಬದ್ದು ಭಂಡಾರ ನನ್ನ ಬಳಿ ಇದೆ. ಅವರ ಹತ್ತಿರ ಇರೋದನ್ನ ಜನರ ಮುಂದೆ ಇಡಲಿ. ಜಡ್ಜ್ ತಾನೇ ಜೈಲಿಗೆ ಕಳಿಸೋದು. ಪಾಪ ಅವರೇ ಜಡ್ಜ್ ಆಗಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಆರ್‌ಸಿಬಿ ಸೇಲ್‌ – ಪುಣೆಯ ಶತಕೋಟ್ಯಧಿಪತಿ ಪೂನಾವಾಲಾ ತೆಕ್ಕೆಗೆ ಹೋಗುತ್ತಾ ಬೆಂಗಳೂರು?

ಇದಕ್ಕೂ ಮುನ್ನ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, 2006ರಲ್ಲಿ 5 ಟೌನ್‌ಶಿಪ್‌ಗಳನ್ನು ಮಾಡಲು ನಿರ್ಧರಿಸಿದ್ದೆ. ನಾನು ಟೌನ್‌ಶಿಪ್ ಮಾಡಲು ಮುಂದಾದಾಗ ಬೆಂಗಳೂರು ಭೂಮಿ ಹೊಡೆಯಲು ಪ್ರಯತ್ನ ಅಂದರು. ಈಗ ಅವರೇ ಜಾರಿಗೆ ಮುಂದಾಗಿದ್ದಾರೆ ಅಂತ ಟೀಕಿಸಿದ್ದಾರೆ. ಈ ಹಿಂದೆ, ನೀವು 2000-3000 ಎಕರೆ ಏನು ಮಾಡಿದ್ದೀರಿ ಗೊತ್ತಿದೆ. ಜನ 5 ವರ್ಷ ಸಮಯ ಕೊಟ್ಟರೇ, ಏನು ಮಾಡಬಹುದು ಅಂತ ಗೊತ್ತಿದೆ. ತಮ್ಮ ಸಂಬಂಧಿಗಾಗಿ ಲೂಟಿ ಹೊಡೆಯೋಕೆ ಡಿಕೆ ಮುಂದಾಗಿರಬಹುದು. ಹೆಚ್ಚು ಕಮ್ಮಿಯಾದ್ರೆ, ಕುಣಿಗಲ್ ಅಲ್ಲ, ಮಂಗಳೂರನ್ನೂ ಬೆಂಗಳೂರಿಗೆ ಸೇರಿಸಬಹುದು. ದೇವೇಗೌಡರು-ಕುಮಾರಸ್ವಾಮಿಯನ್ನು ಮುಗಿಸಲು ದೇವಸ್ಥಾನ ಓಡಾಡಿ ಪೂಜೆ ಮಾಡುತ್ತಿದ್ದಾರೆ ಅಂದಿದ್ದಾರೆ. ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಸಿಡಿದೆದ್ದಿದ್ದಾರೆ. ಇದನ್ನೂ ಓದಿ:  ಧರ್ಮಸ್ಥಳ ಪ್ರಕರಣಗಳ ತನಿಖೆ ಆದಷ್ಟು ಬೇಗ ಮುಕ್ತಾಯ: ಪರಮೇಶ್ವರ್