ಬಸ್ ಎಲ್ಲಿ ನಿಲುಗಡೆ ಆಗುತ್ತೆ ಎಂದು ಕೇಳಿದ್ದ ಪ್ರಯಾಣಿಕನ ಕೆನ್ನೆಗೆ ಬಾರಿಸಿದ ಕೆಎಸ್‍ಆರ್ ಟಿಸಿ ಸಿಬ್ಬಂದಿ!

ಬೆಳಗಾವಿ: ಬಸ್ ಎಲ್ಲಿ ನಿಲುಗಡೆ ಆಗುತ್ತೆ ಎಂದು ಕೇಳಿದ ಪ್ರಯಾಣಿಕನಿಗೆ ಕೆಎಸ್‍ಆರ್ ಟಿಸಿ ಸಿಬ್ಬಂದಿ ಕೆನ್ನೆಗೆ ಹೊಡೆದ ಘಟನೆ ಜಿಲ್ಲೆಯ ರಾಯಬಾಗ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.

ಹಾರೋಗೇರಿ ಪಟ್ಟಣಕ್ಕೆ ಹೋಗಲು ನಿಲ್ದಾಣದಲ್ಲಿ ಬಸ್ ಎಲ್ಲಿ ನಿಲುಗಡೆ ಆಗುತ್ತೆ ಎಂದು ಪ್ರಯಾಣಿರೊಬ್ಬರು ಪ್ರಶ್ನೆ ಮಾಡಿದ್ರು. ಪದೇ ಪದೇ ಇದೇ ರೀತಿ ಪ್ರಯಾಣಿಕ ಪ್ರಶ್ನೆ ಮಾಡಿದ್ದಕ್ಕೆ ಕೋಪಗೊಂಡ ಸಾರಿಗೆ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ.

ಹಲ್ಲೆಯ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದುಕೊಂಡಿದ್ದು, ಸದ್ಯ ವಾಟ್ಸಪ್‍ಗಳಲ್ಲಿ ಹರಿದಾಡುತ್ತಿದೆ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *