ನಾವ್ ಒಂದು ವಾರ ಹೆಂಡ್ತಿನಾ ಬಿಡಲ್ಲ, ಸ್ವಾಮೀಜಿಗಳು ಮದ್ವೆಯನ್ನೇ ಆಗಲ್ಲ: ಈಶ್ವರಪ್ಪ

ತುಮಕೂರು: ಸರ್ವಸಂಗ ಪರಿತ್ಯಾಗಿಗಳ ಮುಂದೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಪತ್ನಿಯರ ವಿಚಾರವಾಗಿ ಮಾತನಾಡಿ, ಹಾಸ್ಯ ಮಾಡಿದ ಪ್ರಸಂಗ ಇಂದು ತುರುವೇಕೆರೆಯಲ್ಲಿ ನಡೆದಿದೆ.

ತುರುವೇಕೆರೆಯ ಕಾಡಸಿದ್ದೇಶ್ವರ ಮಠದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಇಡೀ ಜೀವನವನ್ನು ತ್ಯಾಗ ಮಾಡಿ ನಮ್ಮೆಲ್ಲರ ಕಲ್ಯಾಣಕ್ಕೆ ಸ್ವಾಮೀಜಿಗಳು ಶ್ರಮಿಸುತ್ತಾರೆ. ಯಾವುದೋ ಜನ್ಮದಲ್ಲಿ ಮಾಡಿದ ಪುಣ್ಯದಿಂದ ಅಂತಹ ಪೂಜ್ಯರ ಕಾರ್ಯಕ್ರದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ನಾವೆಲ್ಲ ಸಂಸಾರಸ್ಥರು, ಒಂದು ವಾರ ಹೆಂಡತಿಯನ್ನು ಬಿಡಲ್ಲ. ನಾವ್ ಬಿಡ್ತೀವಾ ಎಂದು ಪ್ರಶ್ನಿಸಿ ಕಾರ್ಯಕ್ರದಲ್ಲಿ ನಗೆ ಹರಿಸಿದರು.

ಸ್ವಾಮೀಜಿಗಳಿಗೆ ಮದುವಯನ್ನೇ ಆಗಲ್ಲ. ಅವರು ಸ್ವಾಮೀಜಿ ಆಗುವುದಕ್ಕೂ ಮುನ್ನ ಬ್ರಹ್ಮಚರ್ಯ ಅನುಸರಿಸುತ್ತಾರೆ. ಇಂಥವರನ್ನ ನಾವು ತ್ಯಾಗಿಗಳು ಎನ್ನುತ್ತೇವೆ. ನಾವೆಲ್ಲ ಭೋಗಿಗಳು, ನಮ್ಮ ಜೀವನದ ಎಲ್ಲಾ ಆನಂದವನ್ನು ನಾವು ಕಾಣುತ್ತೇವೆ. ತ್ಯಾಗಿಗಳು ಆನಂದ ಅನುಭವಿಸಿದಂತಹ ಭೋಗಿಗಳಿಗೆ ಇನ್ನೂ ಒಳ್ಳೆದಾಗಲಿ ಎಂದು ಆಶೀರ್ವಾದ ಮಾಡುತ್ತಾರೆ ಎಂದರು.

Comments

Leave a Reply

Your email address will not be published. Required fields are marked *