ಸ್ಪೈಡರ್ ಮ್ಯಾನ್ ಖ್ಯಾತಿಯ ಕೋತಿ ರಾಜ್ ಜೋಗದಲ್ಲಿ ನಾಪತ್ತೆ

ಶಿವಮೊಗ್ಗ: ಭಾರತದ ಸ್ಪೈಡರ್ ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ಚಿತ್ರದುರ್ಗದ ಕೋತಿರಾಜ್ ಅಲಿಯಾಸ್ ಜ್ಯೋತಿರಾಜ್ ಜೋಗದಲ್ಲಿ ನಾಪತ್ತೆಯಾಗಿದ್ದಾರೆ.

ಬೆಂಗಳೂರಿನ ರಾಮಗೊಂಡನಹಳ್ಳಿಯ ಯುವಕ ಜಲಪಾತದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಹಿನ್ನೆಲೆಯಲ್ಲಿ ಮೃತದೇಹದ ಶೋಧಕ್ಕಾಗಿ ಇಳಿದಿದ್ದ ವೇಳೆ ಘಟನೆ ನಡೆದಿದೆ.

ಜೋಗದ ಬಾಂಬೆ ಐಬಿ ಕಡೆಯಿಂದ ಜಲಪಾತಕ್ಕೆ ಇಳಿದಿದ್ದ ಕೋತಿರಾಜ್ ಮಧ್ಯಾಹ್ನ ಮೂರು ಗಂಟೆಯಿಂದ ನಾಪತ್ತೆಯಾಗಿದ್ದಾರೆ. ಜೊತೆಗಿದ್ದವರಿಗೆ ಇಳಿಜಾರಿನ ಬಂಡೆಗಳಲ್ಲಿ ಇಳಿಯುವ ವೇಳೆ ಕೈಸನ್ನೆ ಮಾಡಿದ ಬಳಿಕ ನಾಪತ್ತೆಯಾಗಿದ್ದಾರೆ.

ಮೃತ ದೇಹ ಪತ್ತೆ ಮಾಡಲು ಚಿತ್ರದುರ್ಗದಿಂದ ಜ್ಯೋತಿರಾಜ್ ಮತ್ತು ಸಹಚರರನ್ನು ಕರೆಸಲಾಗಿತ್ತು. ಜೋಗ ಪೊಲೀಸರು, ಅಗ್ನಿಶಾಮ ಕದಳ, ಸ್ಥಳೀಯರಿಂದ ಜ್ಯೋತಿರಾಜ್ ಗಾಗಿ ಈಗ ಹುಡುಕಾಟ ನಡೆಯುತ್ತಿದೆ.

 

https://youtu.be/4nriJLe3cYg

Comments

Leave a Reply

Your email address will not be published. Required fields are marked *