ಮೊಬೈಲ್ ನಲ್ಲಿ ಬ್ಯುಸಿಯಾಗಿ ಊಟ ರೆಡಿ ಮಾಡಲು ಮರೆತಿದ್ದ ಪತ್ನಿಯನ್ನು ಬರ್ಬರವಾಗಿ ಕೊಂದೇ ಬಿಟ್ಟ!

ಕೋಲ್ಕತ್ತಾ: ಸಾಮಾಜಿಕ ಜಾಲತಾಣ ಹೆಚ್ಚಾಗಿ ಬಳಕೆ ಮಾಡುತ್ತಿದ್ದ ಪರಿಣಾಮ ಮಹಿಳೆಯೊಬ್ಬರು ಮಧ್ಯಾಹ್ನ ಅಡುಗೆ ಮಾಡಲು ಮರೆತಿದ್ದರಿಂದ ಸಿಟ್ಟುಗೊಂಡ ಪತಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆಯೊಂದು ನಡೆದಿದೆ.

ಈ ಘಟನೆ ಗುರುವಾರ ಕೋಲ್ಕತ್ತಾದ ಚೆಟ್ಲಾ ಪ್ರದೇಶದ ಅಲಿಪೊರೆ ರಸ್ತೆಯಲ್ಲಿ ನಡೆದಿದೆ. ಘಟನೆ ಸಂಬಂಧ ಆರೋಪಿ ಪತಿ ಸುರಜಿತ್ ಪಾಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪತಿ ಆತನ 36 ವರ್ಷದ ಪತ್ನಿಗೆ ಅಕ್ರಮ ಸಂಬಂಧವಿದೆ. ಹೀಗಾಗಿ ಪತ್ನಿ ಟುಂಪಾ ತನ್ನ ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣದಲ್ಲೇ ಕಳೆಯತ್ತಾಳೆ ಅಂತ ಶಂಕಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಏನಿದು ಘಟನೆ?:
ಜನವರಿ 24ರಂದು ಸುರಜಿತ್ ಮಧ್ಯಾಹ್ನ ಊಟಕ್ಕಾಗಿ ಮನೆಗೆ ಬಂದಿದ್ದಾನೆ. ಈ ವೇಳೆ ಪತ್ನಿ ತನ್ನ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದಳು. ಹೀಗಾಗಿ ಅಡುಗೆ ಮಾಡುವುದನ್ನು ಮರೆತಿದ್ದಳು. ಪರಿಣಾಮ ಸಿಟ್ಟುಗೊಂಡ ಪತಿರಾಯ ಚಾಕು ತೋರಿಸಿ ಬೆದರಿಸಿದ್ದಾನೆ. ಆದ್ರೂ ಆಕೆ ಮೊಬೈಲ್ ನಲ್ಲೇ ಬ್ಯುಸಿಯಾಗಿದ್ದಳು. ಇದರಿಂದ ಮತ್ತಷ್ಟು ಕೋಪಗೊಂಡ ಪತಿ ಸುರಜಿತ್ ತನ್ನ ಕೈಯಲ್ಲಿದ್ದ ಚಾಕುವಿನಿಂದ ಆಕೆಯ ತಲೆಗೆ ಹಲವು ಬಾರಿ ಇರಿದ್ದಾನೆ. ಅಲ್ಲದೇ ಟವೆಲ್ ನಿಂದ ಆಕೆಯ ಕುತ್ತಿಗೆಗೆ ಬಿಗಿದು ಕೊಲೆಗೈದಿದ್ದಾನೆ.

ಹೀಗೆ ಮಾಡಿದ ಬಳಿಕ ತಾನೇನು ಮಾಡುತ್ತಿದ್ದೇನೆಂದು ತಿಳಿದ ಸುರಜಿತ್, ತನ್ನ ಕೈಯ ಮಣಿಕಟ್ಟನ್ನು ಕುಯ್ದುಕೊಳ್ಳುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಇದು ಸಾಧ್ಯವಾಗದಾಗ ನಂತರ ಗಾಯಗಳಾದ ಕಡೆ ಬ್ಯಾಂಡೇಜ್ ಸುತ್ತಿದ್ದಾನೆ. ಅಲ್ಲದೇ ನಗರದ ಮೂಲಕ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಈತನ ಮೇಲೆ ಅನುಮಾನಗೊಂಡ ಪೊಲೀಸರು ಬಂಧಿಸಿದ್ದಾರೆ.

 

ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅದರಲ್ಲಿ ಓರ್ವ ಮದುವೆಗೆಂದು ನಗರದ ಕಡೆ ತೆರಳಿದ್ದನು. ಇನ್ನೋರ್ವ ಕಾಲೇಜು ಓದುತ್ತಿದ್ದು, ಕಾಲೇಜಿನಿಂದ ಬಂದ ಬಳಿಕ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವ ತನ್ನ ತಾಯಿಯ ದೇಹವನ್ನು ನೋಡಿ ದಂಗಾಗಿದ್ದಾನೆ.

ಪತ್ನಿ ಟುಂಪಾ ಫೇಸ್ ಬುಕ್ ಮತ್ತು ವಾಟ್ಸಪ್ ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದುದರಿಂದ ಆಕೆಗೆ ಬೇರೊಬ್ಬನ ಜೊತೆ ಸಂಬಂಧವಿದೆಯೆಂದು ಶಂಕಿಸಿ ಪತಿ ಸರ್ಜಿತ್ ಕೃತ್ಯ ಎಸಗಿರಬಹುದು ಅಂತ ಸ್ಥಳಿಯ ನಿವಾಸಿಗಳು ತಿಳಿಸಿದ್ದಾರೆ. ಕೆಲ ದಿನಗಳ ನಾದಿನಿ ಜೊತೆ ಗಂಡನಿಗೆ ಅಕ್ರಮ ಸಂಬಂಧ ಇರುವ ವಿಚಾರ ಟುಂಪಾಗೆ ಗೊತ್ತಾಗಿದೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *