550 ಕಿ.ಮೀ ಸೈಕಲ್ ತುಳಿದು ಕಿಚ್ಚನ ಹುಟ್ಟುಹಬ್ಬಕ್ಕೆ ಬಂದ ಅಭಿಮಾನಿ

ತುಮಕೂರು: ಕಿಚ್ಚ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಯೋರ್ವ ಶುಭಾಶಯ ಕೋರಲು ಸೈಕಲ್ ಯಾತ್ರೆ ಮೂಲಕ ಬೆಂಗಳೂರು ಹೊರವಲಯದ ನೆಲಮಂಗಲ ತಲುಪಿದ್ದಾರೆ.

ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಯಲ್ಲಪ್ಪ ಎಂಬ ಅಭಿಮಾನಿ ಸೈಕಲ್ ಯಾತ್ರೆ ಬಂದಿದ್ದಾರೆ. ಕಳೆದ 8 ದಿನದಿಂದ ಸೈಕಲ್‍ನಲ್ಲಿಯೇ ಬೆಂಗಳೂರಿಗೆ ಬಂದಿದ್ದಾರೆ. ಈ ನಡುವೆ ತುಮಕೂರಿಗೆ ಬಂದಿದ್ದ ಅವರನ್ನು ಕಿಚ್ಚ ಸುದೀಪ್ ಅಭಿಮಾನಿಗಳು ಯಲ್ಲಪ್ಪರಿಗೆ ಹಣ್ಣು-ಹಂಪಲು, ಆಹಾರ ಪದಾರ್ಥ ನೀಡಿ ಅಭಿನಂದಿಸಿದ್ದಾರೆ.

ಶನಿವಾರ ಸಂಜೆ ನೆಲಮಂಗಲಕ್ಕೆ ಬಂದ ಯಲ್ಲಪ್ಪರನ್ನು ಅಲ್ಲಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿ ಅವರು ಅತ್ಮೀಯವಾಗಿ ಬರಮಾಡಿಕೊಂಡು ರಾತ್ರಿ ಉಳಿಯಲು ವ್ಯವಸ್ಥೆ ಮಾಡಿದ್ದರು. ಈ ವಿಚಾರವನ್ನು ನೆಲಮಂಗಲದ ಅಭಿಮಾನಿಗಳು ಟ್ವಿಟ್ಟರ್‍ ಗೆ ಹಾಕಿದ್ದು ಇದನ್ನು ಕಂಡ ಕಿಚ್ಚ ಕೂಡ ರೀಟ್ವೀಟ್ ಮಾಡುವ ಮೂಲಕ ಅಭಿನಂದನೆ ತಿಳಿಸಿದ್ದರು.

ನಾಳೆ ಅಂದರೆ ಸೆಪ್ಟೆಂಬರ್ 02 ರಂದು ನಡೆಯಲಿರುವ ಕಿಚ್ಚ ಸುದೀಪ್ ಬರ್ತ್ ಡೇ ಸಂಭ್ರಮದಲ್ಲಿ ಯಲ್ಲಪ್ಪ ಪಾಲ್ಗೊಳ್ಳಲಿದ್ದಾರೆ. ಸುಮಾರು 550 ಕಿ.ಮೀ ದೂರ ಸೈಕಲ್ ಮೂಲಕ ಪ್ರಯಾಣಿಸಿ ಬೆಂಗಳೂರಿಗೆ ಬಂದಿರುವ ಯಲ್ಲಪ್ಪ ಅಭಿಮಾನ ಮೆರೆದಿದ್ದಾರೆ.

Comments

Leave a Reply

Your email address will not be published. Required fields are marked *