ರ‍್ಯಾಪರ್ ಚಂದನ್ ಶೆಟ್ಟಿ ಆಸೆಯನ್ನು ಈಡೇರಿಸಿದ ಕಿಚ್ಚ ಸುದೀಪ್!

ಬೆಂಗಳೂರು: ಬಿಗ್‍ಬಾಸ್ ಸೀಸನ್-5ರ ಟ್ರೋಫಿ ಮುಡಿಗೇರಿಸಿಕೊಂಡಿರೋ ರ‍್ಯಾಪ್ ಸಿಂಗರ್ ಚಂದನ್ ಶೆಟ್ಟಿಯ ಆಸೆಯನ್ನು ಕಿಚ್ಚ ಸುದೀಪ್ ನೆರವೇರಿಸಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಚಂದನ್, ಸುದೀಪ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ನಾನು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ನನ್ನ `ಟಕಿಲ’ ಹಾಡು ಬಿಡುಗಡೆಯಾಗಿತ್ತು. ಇದ್ದಕ್ಕೆ ನಾನು ಸುದೀಪ್ ಸರ್‍ಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ದೊಡ್ಡ ದೊಡ್ಡ ಸಿನಿಮಾಗಳು ಬಿಗ್ ಬಾಸ್ ವೇದಿಕೆಯಲ್ಲಿ ಪ್ರಮೋಟ್ ಮಾಡೋದು ದೊಡ್ಡ ವಿಚಾರ. ನಾನು ಬಿಗ್ ಬಾಸ್ ಮನೆಗೆ ಹೋಗುವಾಗ ಸುದೀಪ್ ಅವರ ಮುಂದೆ ನನ್ನ ಕೋರಿಕೆ ಹೇಳಿಕೊಂಡಿದೆ. ನನ್ನ `ಟಕಿಲ’ ಹಾಡನ್ನು ರಿಲೀಸ್ ಮಾಡಿಕೊಡಿ ಎಂದು ಕೇಳಿಕೊಂಡಿದ್ದೆ ಎಂದು ಚಂದನ್ ಶೆಟ್ಟಿ ಹೇಳಿದ್ದರು.

ನನ್ನ `ಟಕಿಲ’ ಹಾಡನ್ನು ರಿಲೀಸ್ ಮಾಡಿಕೊಡಿ ಎಂದಾಗ ಅವರು ಸರಿ ಎಂದು ನನಗೆ ಪ್ರಾಮಿಸ್ ಕೂಡ ಮಾಡಿದ್ದರು. ಬಳಿಕ ಅವರು ನನ್ನ ಹತ್ತಿರ ಹೇಳಿದಂತೆ ಅವರ ಮಾತನ್ನು ಉಳಿಸಿಕೊಂಡಿದ್ದಾರೆ. ಸುದೀಪ್ ಸರ್ ಕರ್ನಾಟಕದ ಕಿರೀಟದ ವಜ್ರ. ಬಿಗ್ ಬಾಸ್ ವೇದಿಕೆಯಲ್ಲಿ `ಟಕಿಲ’ ಹಾಡು ಬಿಡುಗಡೆ ಆಗಿದ್ದಕ್ಕೆ ಅದು ಸಾಕಷ್ಟು ಜನಪ್ರಿಯವಾಯಿತ್ತು. 1 ದಿನದಲ್ಲಿ 12 ಲಕ್ಷಕ್ಕೂ ಹೆಚ್ಚು ವ್ಯೂ ಕಂಡಿತ್ತು. ಇದರಿಂದ ಬಿಗ್ ಬಾಸ್ ಎಷ್ಟು ಜನಪ್ರಿಯ ಕಾರ್ಯಕ್ರಮ ಎಂದು ತಿಳಿಯುತ್ತದೆ. `ಟಕಿಲ’ ಹಾಡು ಬಿಗ್ ಬಾಸ್ ವೇದಿಕೆಯಲ್ಲಿ ಬಿಡುಗಡೆ ಮಾಡಿದ್ದಕ್ಕೆ ನನಗೆ ತುಂಬಾನೇ ಗೌರವ ಇದೆ ಎಂದು ಚಂದನ್ ಶೆಟ್ಟಿ ತಿಳಿಸಿದ್ದಾರೆ.

`ಟಕಿಲ’ ಹಾಡು ದಿವಾಕರ್ ಗೆ ತುಂಬಾನೇ ಇಷ್ಟ. ಈ ಹಾಡನ್ನು ನಾನು ದಿವಾಕರಿಗೆ ಡೆಡಿಕೇಟ್ ಮಾಡುತ್ತೇನೆ ಎಂದು ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಚಂದನ್ ಶೆಟ್ಟಿ ಹೇಳಿದ್ದರು.

ಮೊದಲ ಬಾರಿಗೆ ನಾನು ಈ ಹಾಡನ್ನು ಬಿಗ್ ಬಾಸ್ ಮನೆಯಲ್ಲಿ ಕೇಳಿದ್ದಾಗ ಇದು 50 ಲಕ್ಷ ವ್ಯೂ ಬರುತ್ತೆ ಎಂದು ಹೇಳಿದೆ. ಆದರೆ ಅವರ ತಂದೆ ಬಂದು ಈ ಹಾಡಿಗೆ 1ಕೋಟಿ 30ಲಕ್ಷಕ್ಕೂ ಹೆಚ್ಚು ವ್ಯೂ ಬಂದಿದೆ ಎಂದು ತಿಳಿಸಿದ್ದಾಗ ನನಗೆ ಖುಷಿಯಾಯಿತ್ತು ಎಂದು ದಿವಾಕರ್ ತಿಳಿಸಿದ್ದರು.

105ದಿನ ಬಿಗ್‍ಬಾಸ್ ಮನೆಯಲ್ಲಿ ಭರ್ಜರಿ ಮನರಂಜನೆ ನೀಡಿ ಸೋಮವಾರ ರಾತ್ರಿ ಬಿಡದಿಯ ಫಿಲ್ಮ್‍ಸಿಟಿಯಿಂದ ನಿರ್ಗಮಿಸಿದ್ದರು. ಜನರ ಮನ ಗೆದ್ದಿದ್ದ ಚಂದನ್ ಶೆಟ್ಟಿಯನ್ನು ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡರು. ಮೆರವಣಿಗೆ ಮೂಲಕ ಸಾವಿರಾರು ಜನರೊಂದಿಗೆ ಆಗಮಿಸಿದ್ದರು. ಬಳಿಕ ನಗರದ ಆಂಜನೇಯ ದೇವಸ್ಥಾನಕ್ಕೆ ತೆರಳಿ ಚಂದನ್ ಶೆಟ್ಟಿ ಪೂಜೆ ಸಲ್ಲಿಸಿದ್ದರು.

Comments

Leave a Reply

Your email address will not be published. Required fields are marked *