ಕೇರಳದ ಸ್ವಾಮೀಜಿಯ ಮರ್ಮಾಂಗ ಕತ್ತರಿಸಿದ್ದು ಮಗಳ ಬಾಯ್ ಫ್ರೆಂಡ್ – ತಾಯಿಯಿಂದ ದೂರು

ತಿರುವನಂತಪುರ: ಕೇರಳದಲ್ಲಿ ಸ್ವಾಮೀಜಿಯ ಮರ್ಮಾಂಗವನ್ನು ಯುವತಿಯೊಬ್ಬಳು ಕಟ್ ಮಾಡಿದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

ಸ್ವಾಮೀಜಿಯ ಮರ್ಮಾಂಗವನ್ನು ನನ್ನ ಮಗಳು ಕಟ್ ಮಾಡಿಲ್ಲ, ಬದಲಾಗಿ ಆಕೆಯ ಪ್ರಿಯಕರ ಕಟ್ ಮಾಡಿದ್ದಾನೆ ಎಂದು ಯುವತಿಯ ತಾಯಿ ಹಾಗೂ ಸೋದರ ಪೊಲೀಸರಿಗೆ ತಿಳಿಸಿದ್ದಾರೆ. ನನ್ನ ಮಗಳು ಸ್ವಾಮಿ ವಿರುದ್ಧ ಸುಳ್ಳು ದೂರು ನೀಡಿದ್ದಾಳೆ ಎಂದು ಯುವತಿಯ ತಾಯಿ ಆರೋಪಿಸಿದ್ದಾರೆ.

ನನ್ನ ಪುತ್ರಿಗೆ ಒಬ್ಬ ಹುಡುಗನ ಜೊತೆ ಲವ್ ಇದೆ. ಆದರೆ ಇದಕ್ಕೆ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಆಕೆಗೆ ಸ್ವಾಮಿಯ ಮೇಲೆ ದ್ವೇಷವಿತ್ತು. ಆಕೆಯ ಮಾನಸಿಕ ಸ್ಥಿಮಿತವನ್ನೂ ಕಳೆದುಕೊಂಡಿದ್ದಾಳೆ. ಸ್ವಾಮೀಜಿ ನಮ್ಮ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾನೆ ಎಂದು ಬಾಯ್ ಫ್ರೆಂಡ್‍ಗೆ ತಿಳಿಸಿದ್ದಳು. ಗಂಗೇಶಾನಂದ ಸ್ವಾಮಿ ಈ ಪ್ರಕರಣದಲ್ಲಿ ನಿರಪರಾಧಿಯಾಗಿದ್ದು ನನ್ನ ಮಗಳ ಬಾಯ್ ಫ್ರೆಂಡ್ ಈ ಕೃತ್ಯವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ದೂರಿನ ಬಗ್ಗೆ ವಿಸ್ತೃತ ತನಿಖೆ ನಡೆಸುವಂತೆ ಐಜಿ ಮನೋಜ್ ಅಬ್ರಹಾಂಗೆ ಡಿಜಿಪಿ ಸೂಚಿಸಿದ್ದಾರೆ.

ಇದನ್ನೂ ಒದಿ: ರೇಪಿಸ್ಟ್ ಕಾಮಿ ಸ್ವಾಮೀಜಿಯ ಮರ್ಮಾಂಗವನ್ನೇ ಕಟ್ ಮಾಡಿದ್ಳು ಯುವತಿ!-ಏನಿದು ಘಟನೆ? ಇಲ್ಲಿದೆ ಪೂರ್ಣ ಮಾಹಿತಿ

ಸ್ವಾಮಿ ನನ್ನ ಮಗಳಿಗೆ ಯಾವುದೇ ಲೈಂಗಿಕ ಕಿರುಕುಳ ನೀಡಿಲ್ಲ ಎಂದೂ ತಾಯಿ ಹೇಳಿದ್ದಾರೆ. ಸ್ವಾಮಿ ಗಂಗೇಶಾನಂದ ತೀರ್ಥಪಾದ ಮರ್ಮಾಂಗವನ್ನು ಯುವತಿ ಕಳೆದ ವಾರ ಕತ್ತರಿಸಿದ್ದಳು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಆದರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸ್ವಾಮಿ ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದ್ದೇನೆ. ಯುವತಿ ಸುಳ್ಳು ಹೇಳುತ್ತಿದ್ದಾಳೆ. ಆಕೆಯ ಮಾತನ್ನು ನಂಬಬೇಡಿ ಎಂದು ಹೇಳಿದ್ದ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಒಟ್ಟಿನಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿರುವ ಈ ಕೇಸ್ ತನಿಖೆಯೇ ಪೊಲೀಸರಿಗೆ ತಲೆ ನೋವಾಗಿದೆ.

ಇದನ್ನೂ ಒದಿ: ಯುವತಿ ಅಲ್ಲ, ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದೆ: ಕಾಮಿ ಸ್ವಾಮೀಜಿ

Comments

Leave a Reply

Your email address will not be published. Required fields are marked *