ನಾಪತ್ತೆಯಾಗಿದ್ದ ಕಾರವಾರ ಡಿವೈಎಸ್‍ಪಿ ಪತ್ತೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾದ ಬಾರೆ ಸಮೀಪ ನಾಪತ್ತೆಯಾಗಿದ್ದ ಕಾರವಾರ ಡಿವೈಎಸ್ಪಿ ಶಂಕರ ಮಾರಿಯಾಳ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿ ರವಿಚಂದ್ರ ಪತ್ತೆಯಾಗಿದ್ದಾರೆ.

ಇವರು ಯಲ್ಲಾಪು ತಾಲೂಕಿನ ಅರಬೈಲು ಅರಣ್ಯ ಭಾಗದಲ್ಲಿ ಪತ್ತೆಯಾಗಿದ್ದಾರೆ. ಕೈಗಾ ಅರಣ್ಯ ಪ್ರದೇಶದಲ್ಲಿ ಪೋನ್ ಕಾಲ್ ಒಂದರ ಪತ್ತೆಗಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳ ತಂಡ ಮರಳಿ ಕಾರವಾರಕ್ಕೆ ಬರುವಾಗ ಕಾಡಿನಲ್ಲಿ ಡಿವೈಎಸ್‍ಪಿ ಹಾಗೂ ಗುಪ್ತಚರ ಇಲಾಖೆ ಅಧಿಕಾರಿ ರವಿಯವರು ತಂಡದಿಂದ ಹಿಂದೆ ಉಳಿದಿದ್ದಾರೆ.

ಈ ವೇಳೆ ದಾರಿಯಲ್ಲಿ ಚಿರತೆ ಕಂಡ ಹಿನ್ನೆಲೆಯಲ್ಲಿ ತಪ್ಪಿಸಿಕೊಂಡು ಹೋಗುವ ಭರದಲ್ಲಿ ಕಾಡಿನಲ್ಲಿ ದಾರಿ ತಪ್ಪಿದ್ದು ರಾತ್ರಿಯಿಡಿ ಕಾಡಿನಲ್ಲಿ ಸುತ್ತಿ ಯಲ್ಲಾಪುರ ಬಳಿಯ ಅರಬೈಲು ಗಟ್ಟದ ಅರಣ್ಯ ತಲುಪಿದ್ದಾರೆ. ನಂತರ ಅಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿ ನಡೆದ ಘಟನೆ ವಿವರಿಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.

Comments

Leave a Reply

Your email address will not be published. Required fields are marked *