ಕಾರವಾರ: ಹಸಿವು ನೀಗಿಸಿಕೊಳ್ಳಲು ನಾಯಿಮರಿಯನ್ನೇ ನುಂಗಲು ಯತ್ನಿಸಿದ ನಾಗರಹಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬನವಾಸಿ ರಸ್ತೆಯ ಶನೀಶ್ವರ ದೇವಸ್ಥಾನದ ಬಳಿ ನಾಗರಹಾವೊಂದು ತನ್ನ ಹಸಿವನ್ನು ನೀಗಿಸಿಕೊಳ್ಳಲು ನಾಯಿಮರಿಯನ್ನು ನುಂಗಲು ವ್ಯರ್ಥ ಪ್ರಯತ್ನ ಪಟ್ಟಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

ಕಿರಣ್ ಫರ್ನಾಂಡಿಸ್ ಎಂಬವರು ಸಾಕಿದ ನಾಯಿ ಒಂದು ತಿಂಗಳ ಹಿಂದೆ ಆರು ಮರಿಗಳಿಗೆ ಜನ್ಮ ನೀಡಿತ್ತು. ಸೋಮವಾರ ರಾತ್ರಿ ನಾಯಿಮರಿಗಳು ಓಡಾಡಿಕೊಂಡಿದ್ದನ್ನು ಕಂಡ ಹಸಿದ ನಾಗರಹಾವು ಇವುಗಳತ್ತ ಬಂದಿದೆ. ಆದರೆ ಗಾತ್ರದಲ್ಲಿ ತನ್ನ ಬಾಯಿಗಿಂತ ದೊಡ್ಡದಿದ್ದ ನಾಯಿ ಮರಿಯನ್ನ ನುಂಗಲಾಗದೇ ಮೂರು ಮರಿಗಳನ್ನ ಕಚ್ಚಿ ಸಾಯಿಸಿದೆ.

ನಾಗರಹಾವು ನಾಯಿಮರಿಯನ್ನು ನುಂಗುತ್ತಿರುವ ದೃಶ್ಯವನ್ನು ಕಿರಣ್ ತಮ್ಮ ಮೊಬೈಲ್ ನಲ್ಲಿ ಚಿತ್ರಿಸಿಕೊಂಡಿದ್ದಾರೆ. ಕೊನೆಗೆ ಉರಗ ತಜ್ಞ ಪ್ರಶಾಂತ್ ಹುಲೇಕಲ್ ಅವರಿಗೆ ಮಾಹಿತಿ ತಿಳಿಸಿ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಇದನ್ನೂ ಓದಿ:ನೀರನ್ನು ಅರಸಿ ನಾಡಿಗೆ ಬಂದ ಕಾಳಿಂಗ: ವಿಡಿಯೋ ನೋಡಿ

ಇದನ್ನೂ ಓದಿ: ನೀರಿನ ಮೂಲ ಹುಡುಕಿ ನಾಡಿಗೆ ಬಂದ 14 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

https://www.youtube.com/watch?v=_AEInlLP15Q

 

 

Comments

Leave a Reply

Your email address will not be published. Required fields are marked *