ಜಮೀನು ನೀರುಪಾಲಾಯ್ತು, ನಾನ್ ಬದ್ಕಿರಲ್ಲ- ಅಳುತ್ತಾ ನೀರಿಗೆ ಧುಮುಕಲು ಹೋದ ಅಜ್ಜಿ

ಬಾಗಲಕೋಟೆ: ಜೀವನೋಪಾಯಕ್ಕಿದ್ದ ಏಕೈಕ ಜಮೀನು ಜಲಾವೃತವಾಗಿದ್ದರಿಂದ ಅಜ್ಜಿಯೊಬ್ಬರು ಜೋರಾಗಿ ಅಳುವ ದೃಶ್ಯ ಎಂಥವರನ್ನೂ ಮನಕಲಕುವಂತೆ ಮಾಡಿದೆ. ಈ ಘಟನೆ ಬಾಗಲಕೋಟೆ ತಾಲೂಕಿನ ಹಿರೇಸಂಶಿ ಗ್ರಾಮದಲ್ಲಿ ನಡೆದಿದೆ.

ಹಿರೇಸಂಶಿ ಗ್ರಾಮದ ಪದ್ದವ್ವ ಜೋಗಿನ್ ಎಂಬ ವೃದ್ಧೆಯೇ ಹಾಡಿಕೊಂಡು ಅಳುತ್ತಿರುವ ಅಜ್ಜಿ. ಇವರು ಜೀವನೋಪಾಯಕ್ಕಿದ್ದ ತನ್ನ ನಾಲ್ಕು ಎಕರೆ ಹೊಲದಲ್ಲಿ ಈರುಳ್ಳಿ ಹಾಗೂ ಕಬ್ಬು ಬೆಳೆ ಬೆಳೆದಿದ್ದರು. ಆದರೆ ಘಟಪ್ರಭೆ ನದಿ ಉಕ್ಕಿ ಹರಿದ ಪರಿಣಾಮ ಅಜ್ಜಿಯ ಹೊಲ ಸಂಪೂರ್ಣವಾಗಿ ಜಲಾವೃತಗೊಂಡು ಬೆಳೆ ನಾಶವಾಗಿದೆ.

ಇದರಿಂದ ನೊಂದ ಅಜ್ಜಿ ನೀರು ಪಾಲಾದ ಜಮೀನಿನ ಜೊತೆಗೆ ನಾನೂ ನೀರುಪಾಲುಗುತ್ತೇನೆ ಎಂದು ಜೋರಾಗಿ ಅಳುತ್ತಾ ತನ್ನ ನೋವು ತೋರ್ಪಡಿಸಿಕೊಂಡಿದ್ದಾರೆ. ಆಗ ಪುತ್ರ ನೀರಲ್ಲಿ ಕೊಚ್ಚಿ ಹೋಗುತ್ತಿದ್ದಾಕೆಯನ್ನು ತಡೆದು, ಮಂಗಳೂರಿಗೆ ದುಡಿಯಲು ಹೋಗೋಣ ಬಾ ಎಂದು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಅಜ್ಜಿಯ ಈ ನರಳಾಟ, ಗೋಳಾಟದ ವಿಡಿಯೋ ನೋಡಿದರೆ ಎಂತವರಿಗೂ ಕರಳು ಕಿತ್ತು ಬರುವಂತಿದೆ.

Comments

Leave a Reply

Your email address will not be published. Required fields are marked *