ರಾಜ್ಯದ ಹವಾಮಾನ ವರದಿ: 29-09-2022

Weather Report,

ಳೆದ 2 ವಾರಗಳಿಂದ ಸ್ವಲ್ಪ ಬಿಡುವು ನೀಡಿದ್ದ ಮಳೆರಾಯ ನವರಾತ್ರಿಯ ಸಂಭ್ರಮದ ನಡುವೆ ಮತ್ತೆ ರಾಜ್ಯಕ್ಕೆ ಲಗ್ಗೆಯಿಡಲಿದ್ದಾನೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿಯ ಪರಿಣಾಮ ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಭಾಗಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಮಳೆಯಾಗುವ ಸಾಧ್ಯತೆಯಿದ್ದು, ಹಲವೆಡೆ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ.

weather

ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಗದಗ, ದಾವಣಗೆರೆ, ಮಂಡ್ಯ, ಹಾವೇರಿ, ಬಳ್ಳಾರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 28-19
ಮಂಗಳೂರು: 30-24
ಶಿವಮೊಗ್ಗ: 31-21
ಬೆಳಗಾವಿ: 29-21
ಮೈಸೂರು: 29-19
ಮಂಡ್ಯ: 31-21

ಮಡಿಕೇರಿ: 26-17
ರಾಮನಗರ: 30-20
ಹಾಸನ: 29-19
ಚಾಮರಾಜನಗರ: 31-20
ಚಿಕ್ಕಬಳ್ಳಾಪುರ: 28-19
ಕೋಲಾರ: 29-20

ತುಮಕೂರು: 29-19
ಉಡುಪಿ: 30-24
ಕಾರವಾರ: 29-25
ಚಿಕ್ಕಮಗಳೂರು: 28-18
ದಾವಣಗೆರೆ: 31-21

ಚಿತ್ರದುರ್ಗ: 29-21
ಹಾವೇರಿ: 31-21
ಬಳ್ಳಾರಿ: 31-22
ಗದಗ: 31-21
ಕೊಪ್ಪಳ: 30-22
ರಾಯಚೂರು: 29-22

ಯಾದಗಿರಿ: 28-22
ವಿಜಯಪುರ: 28-21
ಬೀದರ್: 26-21
ಕಲಬುರಗಿ: 28-22
ಬಾಗಲಕೋಟೆ: 30-22

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *