ರಾಜ್ಯದ ಹವಾಮಾನ ವರದಿ: 31-08-2022

Weather Report,

ರಾಜ್ಯದಲ್ಲಿ ಗೌರಿ ಗಣೇಶ ಹಬ್ಬಕ್ಕೆ ವರುಣನ ವಿಘ್ನ ಎದುರಾಗಲಿದೆ. ರಾಜ್ಯದಲ್ಲಿ ಹಬ್ಬದ ಸಂಭ್ರಮಕ್ಕೆ ವರುಣಾಘಾತ ನೀಡಲಿದ್ದು, ಸೆಪ್ಟೆಂಬರ್ 1 ರವರೆಗೆ ಬಹುತೇಕ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನೂ ಮೂರು ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

weather

ಬೆಂಗಳೂರು, ಮಂಗಳೂರು , ಉಡುಪಿ, ರಾಮನಗರ, ಉತ್ತರ ಕನ್ನಡ, ಚಾಮರಾಜನಗರ, ಮಂಡ್ಯ, ರಾಮನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ದಾವಣಗೆರೆ, ಬೆಳಗಾವಿ, ಕೊಪ್ಪಳ ಹಾಗೂ ತುಮಕೂರಿನಲ್ಲಿ ಮಳೆಯ ಮುನ್ಸೂಚನೆ ಸಿಕ್ಕಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ರಾಜ್ಯದಲ್ಲಿ ಜಲಪ್ರಳಯ ಉಂಟಾಗಲಿದ್ದು, ಗೌರಿ ಗಣೇಶ ಹಬ್ಬಕ್ಕೆ ತಣ್ಣೀರೆರಚಿಸುವ ಸಾಧ್ಯತೆಗಳಿವೆ.

weather

ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ, ವಿಜಯಪುರ ಹಾಗೂ ಬೀದರ್‍ನಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 29-21
ಮಂಗಳೂರು: 29- 24
ಶಿವಮೊಗ್ಗ: 31-21
ಬೆಳಗಾವಿ: 29-21
ಮೈಸೂರು: 30-21
ಮಂಡ್ಯ: 31-21

ಕೊಡಗು: 26-18
ರಾಮನಗರ: 30-21
ಹಾಸನ: 28-19
ಚಾಮರಾಜನಗರ: 29-21
ಚಿಕ್ಕಬಳ್ಳಾಪುರ: 28-19
ಕೋಲಾರ: 29-21

ತುಮಕೂರು: 29-21
ಉಡುಪಿ: 29-24
ಕಾರವಾರ: 29-25
ಚಿಕ್ಕಮಗಳೂರು: 28-19
ದಾವಣಗೆರೆ: 31-22

weather

ಚಿತ್ರದುರ್ಗ: 31-21
ಹಾವೇರಿ: 31-22
ಬಳ್ಳಾರಿ: 32-23
ಗದಗ: 31-22
ಕೊಪ್ಪಳ: 31-22
ರಾಯಚೂರು: 32-23

ಯಾದಗಿರಿ: 32-24
ವಿಜಯಪುರ: 31-23
ಬೀದರ್: 31-22
ಕಲಬುರಗಿ: 32-23
ಬಾಗಲಕೋಟೆ: 31-23

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *