ರಾಜ್ಯದ ಹವಾಮಾನ ವರದಿ: 19-05-2022

Weather Report,

ಸಿಲಿಕಾನ್ ಸಿಟಿಯಲ್ಲಿ ಅಬ್ಬರಿಸುತ್ತಿರುವ ವರುಣನ ಆರ್ಭಟ ಇನ್ನೂ 5 ದಿನಗಳ ಕಾಲ ಮುಂದುವರಿಯಲಿದೆ. ಮೋಡ ಕವಿದ ವಾತಾವರಣ ಇರಲಿದ್ದು ಗುಡುಗು ಸಹಿತ ಮಳೆಯಾಲಿದೆ. ತಮಿಳುನಾಡಿನ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಹಾಗೂ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ 5 ದಿನ ಮಳೆ ಉಂಟಾಗಲಿದೆ.

ಈ 5 ದಿನಗಳಲ್ಲಿ ಮೂರು ದಿನ ಜೋರು ಮಳೆ, 2 ದಿನ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಹಾಗೆಯೇ ರಾಜ್ಯದ ಉತ್ತರ ಒಳನಾಡು ಭಾಗಗಳಲ್ಲಿ 4 ದಿನ, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ 3 ದಿನ ಹಾಗೂ ಕರಾವಳಿ ಜಿಲ್ಲೆಗಳಲ್ಲಿ 3 ದಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿ ಎ.ಪ್ರಸಾದ್ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ 21 ರವರೆಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 23-20
ಮಂಗಳೂರು: 28-24
ಶಿವಮೊಗ್ಗ: 24-21
ಬೆಳಗಾವಿ: 27-21
ಮೈಸೂರು: 23-19
ಮಂಡ್ಯ: 24-21

ಕೊಡಗು: 21-17
ರಾಮನಗರ: 24-20
ಹಾಸನ: 22-18
ಚಾಮರಾಜನಗರ: 24-21
ಚಿಕ್ಕಬಳ್ಳಾಪುರ: 22-18
ಕೋಲಾರ: 25-20

ತುಮಕೂರು: 23-20
ಉಡುಪಿ: 28-23
ಕಾರವಾರ: 29-26
ಚಿಕ್ಕಮಗಳೂರು: 21-18
ದಾವಣಗೆರೆ: 25-21

ಚಿತ್ರದುರ್ಗ: 25-21
ಹಾವೇರಿ: 26-21
ಬಳ್ಳಾರಿ: 28-22
ಗದಗ: 26-22
ಕೊಪ್ಪಳ: 27-22
ರಾಯಚೂರು: 31-24

ಯಾದಗಿರಿ: 32-25
ವಿಜಯಪುರ: 32-23
ಬೀದರ್: 34-24
ಕಲಬುರಗಿ: 34-25
ಬಾಗಲಕೋಟೆ: 30-23

Comments

Leave a Reply

Your email address will not be published. Required fields are marked *