ಪೊಲೀಸರಿಗೆ ವೇತನ ಕೊಡೋಕೆ ಬೊಕ್ಕಸದಲ್ಲಿ ದುಡ್ಡಿಲ್ವೇ..?

ಬೆಂಗಳೂರು: ಪೊಲೀಸರಿಗೆ ವೇತನವನ್ನು ಸಕಾಲಕ್ಕೆ ನೀಡಲು ಸಾಧ್ಯವಾಗದಷ್ಟು ರಾಜ್ಯ ಸರ್ಕಾರದ ಬೊಕ್ಕಸ ಖಾಲಿ ಆದಂತೆ ಕಾಣುತ್ತಿದೆ. ಯಾಕಂದ್ರೆ ರಾಜ್ಯದ ಅರ್ಧದಷ್ಟು ಪೊಲೀಸರಿಗೆ ಇನ್ನೂ ಫೆಬ್ರವರಿ ತಿಂಗಳ ಸಂಬಳ ಆಗಿಲ್ಲ.

ಬೆಂಗಳೂರಿನಲ್ಲಿ ಖಜಾನೆ ಒಂದರ ಅಡಿ ಬರುವ ಪೊಲೀಸರಲ್ಲಿ ಬಹುತೇಕರ ಖಾತೆಗೆ ವೇತನ ಬಂದಿದೆ. ಆದರೆ ಖಜಾನೆ ಎರಡರ ಅಡಿ ಬರುವ ಪೊಲೀಸರಿಗೆ ಇನ್ನೂ ಸಂಬಳವೇ ಆಗಿಲ್ಲ. ಅನುದಾನದ ಕೊರತೆ ಹಿನ್ನೆಲೆಯಲ್ಲಿ ವೇತನ ವಿಳಂಬ ಆಗುವ ಸಾಧ್ಯತೆ ಇದೆ. ಈ ವಿಷಯವನ್ನು ಎಲ್ಲಾ ಪೊಲೀಸರಿಗೆ ತಿಳಿಸಬೇಕೆಂದು ಸೂಚಿಸಿ ಹುಬ್ಬಳ್ಳಿ ಧಾರವಾಡದ ಪೊಲೀಸ್ ಆಯುಕ್ತ ಆರ್ ದಿಲೀಪ್, ತಮ್ಮ ಅಧೀನ ಅಧಿಕಾರಿಗಳಿಗೆ ಫ್ಯಾಕ್ಸ್ ಸಂದೇಶ ರವಾನಿಸಿದ್ದಾರೆ.

ಡಿಸಿಎಂ ಅಶ್ವಥ್ ನಾರಾಯಣ್ ಅವರು ಮಾತ್ರ, ಸರ್ಕಾರಕ್ಕೆ ಅಂತಹ ಪರಿಸ್ಥಿತಿ ಏನು ಬಂದಿಲ್ಲ ಎಂದಿದ್ದಾರೆ. ಈ ಮಧ್ಯೆ ಮಾಜಿ ಸಚಿವ ಹೆಚ್.ವಿಶ್ವನಾಥ್ ಮಾತನಾಡಿ, ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದೆ. ಆದರೆ ರಾಜಕಾರಣಿಗಳ ಆರ್ಥಿಕ ಬಲ ಜಾಸ್ತಿ ಆಗುತ್ತಿದೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *