ವಿಧಾನಮಂಡಲ ಅಧಿವೇಶನದಲ್ಲೂ ಹಿಜಬ್- ಕೇಸರಿ ಫೈಟ್

ಬೆಂಗಳೂರು: ಕೇವಲ ಶಾಲೆ ಕಾಲೇಜುಗಳಲ್ಲಿ ಮಾತ್ರವಲ್ಲ, ಇವತ್ತಿಂದ ಆರಂಭವಾದ ವಿಧಾನಮಂಡಲ ಅಧಿವೇಶನದಲ್ಲಿಯೂ ಹಿಜಬ್ -ಕೇಸರಿ ಸಂಘರ್ಷ ಪ್ರತಿಧ್ವನಿಸಿದೆ.

ಮೊದಲ ದಿನವಾದ ಇಂದು ಕಾಂಗ್ರೆಸ್ ಸದಸ್ಯರು ಕೈಗೆ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಕಳೆದ ವಾರ ಸವಾಲು ಹಾಕಿದಂತೆಯೇ ಕಲಬುರಗಿ ಶಾಸಕಿ ಖನೀಜ್ ಫಾತಿಮಾ ಹಿಜಬ್, ಬುರ್ಕಾ ಧರಿಸಿ ಸದನಕ್ಕೆ ಬಂದ್ರು. ಇದಕ್ಕೆ ಪ್ರತಿಯಾಗಿ ಬಿಜೆಪಿಯ ನೂತನ ಎಂಎಲ್‍ಸಿ ಡಿಎಸ್ ಅರುಣ್, ಕೇಸರಿ ಶಾಲು ಧರಿಸಿ ಮೊದಲ ದಿನದ ಕಲಾಪದಲ್ಲಿ ಕಾಣಿಸಿಕೊಂಡ್ರು. ಇದನ್ನೂ ಓದಿ: ಹಿಜಬ್ ಧರಿಸಿ ಕಲಾಪಕ್ಕೆ ಆಗಮಿಸಿದ ಕಲಬುರಗಿ ಕಾಂಗ್ರೆಸ್‍ ಶಾಸಕಿ

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ವಿಧಾನಸೌಧವನ್ನ ದೇವಾಲಯ ಅಂದುಕೊಂಡಿದ್ದೇನೆ. ನಾನು ಚುನಾವಣೆ ಪ್ರಚಾರ ಪ್ರಾರಂಭ ಮಾಡಿದ ದಿನದಿಂದ ಕೇಸರಿ ಶಾಲು ಹಾಕಿಕೊಂಡಿದ್ದೇನೆ. ಪ್ರಮಾಣ ವಚನ ಸ್ವೀಕಾರ ಮಾಡುವಾಗಲೂ, ಗೆದ್ದಾಗ ಪ್ರಮಾಣ ಪತ್ರ ಸ್ವೀಕಾರ ಮಾಡೋವಾಗ ಕೂಡ ಕೇಸರಿ ಶಾಲು ಹಾಕಿದ್ದೇನೆ. ಹೀಗಾಗಿ ಮೊದಲ ದಿನ ಸದನಕ್ಕೆ ಬಂದಿರೋದ್ರೀಂದ ಕೇಸರು ಶಾಲು ಧರಿಸಿ ಬಂದಿದ್ದೇನೆ ಅಷ್ಟೇ. ಇದರಲ್ಲಿ ವಿಶೇಷವೇನಿಲ್ಲ ಅಂದ್ರು. ಇದನ್ನೂ ಓದಿ: ಧರ್ಮ ಮುಖ್ಯ ಎಂದು ಪರೀಕ್ಷೆಯನ್ನೇ ಬಹಿಷ್ಕರಿಸಿದ ಶಿವಮೊಗ್ಗ ವಿದ್ಯಾರ್ಥಿನಿಯರು

ನಾಳೆಯ ಕಲಾಪದಲ್ಲಿ ಹಿಜಬ್-ಕೇಸರಿ ಶಾಲು ವಿವಾದ ಆಡಳಿತ ಮತ್ತು ವಿಪಕ್ಷಗಳ ನಡುವೆ ಸಂಘರ್ಷಕ್ಕೆ ಕಾರಣವಾಗುವ ನಿರೀಕ್ಷೆ ಇದೆ. ಇದನ್ನೂ ಓದಿ: ಹಿಜಬ್ ಗಲಾಟೆ ಬೆನ್ನಲ್ಲೇ ರಾಜೀನಾಮೆ ನೀಡಿದ ಬೆಂಗಳೂರು ಶಿಕ್ಷಕಿ

Comments

Leave a Reply

Your email address will not be published. Required fields are marked *