ಫುಟ್‍ಬಾಲ್ ಆಟಗಾರ ಗೋಪಿ ಉದ್ಧಟತನ – ಕ್ಷುಲ್ಲಕ ಕಾರಣಕ್ಕೆ ಬೆಂಗ್ಳೂರಲ್ಲಿ ವಿದೇಶಿ ಪ್ರಜೆ ಮೇಲೆ ಹಲ್ಲೆ

ಬೆಂಗಳೂರು: ರಾಜ್ಯ ಮಟ್ಟದ ಫುಟ್‍ಬಾಲ್ ಆಟಗಾರ ಗೋಪಿ ಕ್ಷುಲ್ಲಕ ಕಾರಣಕ್ಕೆ ವಿದೇಶಿ ಪ್ರಜೆ ಮೇಲೆ ಹಲ್ಲೆ ನಡೆಸಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಶುಕ್ರವಾರ ಗರುಡಾ ಮಾಲ್ ಎದುರು ಈ ಘಟನೆ ನಡೆದಿದೆ. 7 ಬಾರಿ ಸಂತೋಷ್ ಟ್ರೋಫಿ ವಿನ್ನರ್ ಆಗಿರುವ ಗೋಪಿ, ಕಳೆದ ವಾರ ಫುಟ್‍ಪಾತ್ ಮೇಲೆ ಬೈಕ್‍ನಲ್ಲಿ ಬರುತ್ತಿದ್ದರು. ಇದೇ ವೇಳೆ ಅದೇ ಫುಟ್‍ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ವಿದೇಶಿ ಪ್ರಜೆ, ಗೋಪಿಯನ್ನ ಪ್ರಶ್ನಿಸಿದ್ದಾರೆ.

ಫುಟ್‍ಪಾತ್ ಮೇಲೆ ಏಕೆ ಬೈಕ್ ಚಲಾಯಿಸುತ್ತಿದ್ದೀಯ ಅಂತಾ ಪ್ರಶ್ನಿಸಿದ ವಿದೇಶಿ ಪ್ರಜೆಗೆ ಗೋಪಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಕೂಡಲೇ ಅಶೋಕ್‍ನಗರ ಪೊಲೀಸರು ಗೋಪಿಯನ್ನ ಬಂಧಿಸಿದ್ದಾರೆ. ಸದ್ಯ ಗೋಪಿ ಬೇಲ್ ಮೇಲೆ ರಿಲೀಸ್ ಆಗಿದ್ದಾರೆ.

Comments

Leave a Reply

Your email address will not be published. Required fields are marked *