ಹೈಕಮಾಂಡ್ ಸಂದೇಶಕ್ಕೆ ಬಿಎಸ್‍ವೈ ಬೇಸರ!

ಬೆಂಗಳೂರು: ಹೈಕಮಾಂಡ್ ಕಳುಹಿಸಿರುವ ಸಂದೇಶಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಕರ್ನಾಟಕ ಪ್ರವಾಹ ಪರಿಹಾರವಾಗಿ ಕೇಂದ್ರ ಸರ್ಕಾರ ಕೊನೆಗೂ ಮಧ್ಯಂತರ ಅನುದಾನವನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಮಧ್ಯಂತರ ಪರಿಹಾರವಾಗಿ 3,200 ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಕೇಳಿ ಕೊಂಡಿತ್ತು. ಆದರೆ ಕೇಂದ್ರ 1,200 ಕೋಟಿ ರೂ. ನೀಡಿ ತೊಳೆದುಕೊಂಡಿದೆ. ಅನುದಾನ ನೀಡಿದ ಬಳಿಕ ಮಧ್ಯಂತರ ಪರಿಹಾರ ಕೊಟ್ಟಿದ್ದೇವೆ, ಉಳಿದ ಹಣ ಸದ್ಯಕ್ಕಿಲ್ಲ. ಇನ್ನಷ್ಟು ಪರಿಹಾರ ಹಣಕ್ಕೆ ಸ್ವಲ್ಪ ದಿನ ಕಾಯಲೇಬೇಕು ಎಂದು ಬಿಜೆಪಿ ಹೈಕಮಾಂಡ್ ಸಂದೇಶ ರವಾನಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ‘ಈಗಲಾದರೂ ಎಚ್ಚೆತ್ತುಕೊಳ್ಳಲಿ’- ರಾಜ್ಯ ಸರ್ಕಾರ ವಿರುದ್ಧ ಎಚ್‍ಡಿಕೆ ಲೇವಡಿ

ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ನೆರೆ ಇದೆ. ಎಲ್ಲ ರಾಜ್ಯಗಳಿಗೂ ಅಧ್ಯಯನ ತಂಡ ಕಳುಹಿಸಿ ವರದಿ ತರಿಸಿಕೊಳ್ಳಲಾಗುತ್ತಿದೆ. ಎಲ್ಲ ರಾಜ್ಯಗಳ ಜೊತೆ ಕರ್ನಾಟಕಕ್ಕೂ ಸಿಗುತ್ತೆ ಪರಿಹಾರ ಸಿಗಲಿದೆ. ಅಲ್ಲಿವರೆಗೂ ಎಲ್ಲವನ್ನು ನೀವೇ ನಿಭಾಯಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರೈತರ ಬಳಿಕ ಜಿಲ್ಲಾಧಿಕಾರಿ ಮೇಲೆ ಸಿಎಂ ಬಿಎಸ್‍ವೈ ಗರಂ

ಸಂದೇಶದಿಂದ ಬೇಸರಗೊಂಡಿರುವ ಸಿಎಂ, ನಾನು ಕೇಂದ್ರದ ಜೊತೆ ಮಾತನಾಡಲ್ಲ, ನೀವೇ ಮಾತನಾಡಿಕೊಳ್ಳಿ. ಅಮಿತ್ ಶಾ ವಹಿಸಿರುವ ಜವಾಬ್ದಾರಿ ನೀವೇ ನಿಭಾಯಿಸಿಕೊಳ್ಳಿ. ನನಗೆ ನಿಭಾಯಿಸಿ ಸಾಕಾಗಿದೆ. ಇನ್ನು ನನ್ನಿಂದ ಸಾಧ್ಯವಿಲ್ಲ. ಕೇಂದ್ರ ಗೃಹ ಸಚಿವರು, ಪ್ರಧಾನಿ ಭೇಟಿಗೆ ಅವಕಾಶ ಕೇಳಿದೆ ಕೊಟ್ಟಿಲ್ಲ ಎಂದು ರಾಜ್ಯದ ಸಂಸದರು ಮತ್ತು ಕೇಂದ್ರ ಸಚಿವರ ಮೇಲೆ ಪರಿಹಾರದ ಜವಾಬ್ದಾರಿಯನ್ನು ವರ್ಗಾಯಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಪ್ರತಿಭಟನೆಯ ಬಳಿಕ ಎಚ್ಚೆತ್ತ ಕೇಂದ್ರ – ಕರ್ನಾಟಕಕ್ಕೆ 1200 ಕೋಟಿ ಮಧ್ಯಂತರ ಪರಿಹಾರ

Comments

Leave a Reply

Your email address will not be published. Required fields are marked *