ಕರ್ನಾಟಕ ಕೊನೆಗೂ ಕೇಸರಿಮಯ ಆಗಲಿಲ್ಲ: ಪ್ರಕಾಶ್ ರೈ

ಬೆಂಗಳೂರು: ಕರ್ನಾಟಕವು ಕೊನೆಗೂ ಕೇಸರಿಮಯ ಆಗಲಿಲ್ಲ. ಅದು ವರ್ಣರಂಜಿತವಾಗಿ ಮುಂದುವರೆಯುತ್ತಿದೆ ಎಂದು ಚಿತ್ರನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

55 ಗಂಟೆಗಳ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದನ್ನು ಮರೆತುಬಿಡಿ 56ನೇ ಗಂಟೆಯಿಂದ ಹೊಸ ಮುಖ್ಯಮಂತ್ರಿ ಬರುತ್ತಿದ್ದಾರೆ ನೀವು ಚಿಂತಿಸಬೇಡಿ ಎಂದು ಜನರಿಗೆ ರೈ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಿಲ್ಪಾ ಗಣೇಶ್, ಕೊಂಕಣ ಸುತ್ತಿ ಮೈಲಾರಕ್ಕೆ ಯಾಕೆ ಬರುತ್ತೀರಿ, ನೇರವಾಗಿ ನಿಮ್ಮ ಗಂಜಿ ಕೇಂದ್ರದ ಬಾಗಿಲು ಮತ್ತೊಮ್ಮೆ ತೆರೆಯಿತು ಎಂದು ನೇರವಾಗಿ ಹೇಳಬಹುದಿತ್ತಲ್ಲ ಪ್ರಕಾಶ್ ರಾಜ್ ಅವರೇ ಎಂದಿದ್ದಾರೆ.

ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಪ್ರಕಾಶ್ ರೈ ಹಾಗೂ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ಭೇಟಿ ನೀಡಿದ್ದರು. ಈ ವೇಳೆ ಯಾವುದೇ ಕಾರಣಕ್ಕೂ ಕೋಮುವಾದಿಗಳ ಜೊತೆ ಕೈ ಜೋಡಿಸಬೇಡಿ ಎಂದು ಮನವಿ ಮಾಡಿದ್ದರು.

Comments

Leave a Reply

Your email address will not be published. Required fields are marked *