ಕರ್ನಾಟಕ ಕುರುಕ್ಷೇತ್ರಕ್ಕೆ ಮತದಾನ – ಜಯನಗರ, ಆರ್ ಆರ್ ನಗರ ಬಿಟ್ಟು 222 ಕ್ಷೇತ್ರಗಳಿಗೆ ಚುನಾವಣೆ

ಬೆಂಗಳೂರು: ರಾಜಧಾನಿ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳಿಗೆ ಚುನಾವಣೆ ನಡೀತಿದ್ದು, ಟೈಟ್ ಸೆಕ್ಯೂರಿಟಿ ಕೈಗೊಳ್ಳಲಾಗಿದೆ. 10, 500 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನು, ಬೆಂಗಳೂರಲ್ಲಿ ಒಟ್ಟು 7,477 ಮತಗಟ್ಟೆಗಳನ್ನು ತೆರೆಯಲಾಗಿದ್ದು, 1,469 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಎಂದು ಪರಿಗಣಿಸಲಾಗಿದೆ.

222 – ಕ್ಷೇತ್ರ (ಬೆಂಗಳೂರಿನ ಜಯನಗರ, ಆರ್.ನಗರ ಹೊರತು ಪಡಿಸಿ) ಕುರ್ನಾಟಕ ಕುರಕ್ಷೇತ್ರಕ್ಕೆ ಧುಮುಕಿರುವ ಕದನ ಕಲಿಗಳು ಎಷ್ಟು ಜನ ಅಂತ ನೋಡೋದಾದ್ರೆ..

* 2,636 – ಅಭ್ಯರ್ಥಿಗಳು (ಬಿಜೆಪಿ-223(-1), ಕಾಂಗ್ರೆಸ್ -221(-1), ಜೆಡಿಎಸ್ -200 (-1), ಬಿಎಸ್‍ಪಿ( 18) (ಆರ್‍ಆರ್ ನಗರದ ಅಭ್ಯರ್ಥಿಗಳನ್ನ ಬಿಡಬೇಕು)
* 2,419 – ಪುರುಷ ಅಭ್ಯರ್ಥಿಗಳು (ಆರ್‍ಆರ್ ನಗರದ 14 ಅಭ್ಯರ್ಥಿಗಳನ್ನ ಬಿಡಬೇಕು )
* 217 – ಮಹಿಳಾ ಅಭ್ಯರ್ಥಿಗಳು
* 1,146 – ಪಕ್ಷೇತರ ಅಭ್ಯರ್ಥಿಗಳು
* 70+ – ಕಣದಲ್ಲಿರುವ ಪಕ್ಷಗಳ ಸಂಖ್ಯೆ
* 39 – ಮುಳಬಾಗಿಲಿನಲ್ಲಿ ಗರಿಷ್ಠ ಅಭ್ಯರ್ಥಿಗಳು (23 ಕ್ಷೇತ್ರಗಳಲ್ಲಿ 15ಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದಾರೆ)
* 04 – ಸೇಡಂ, ಚಳ್ಳಕೆರೆಯಲ್ಲಿ ಕನಿಷ್ಠ ಅಭ್ಯರ್ಥಿಗಳು
* ಹಿರಿಯ ಅಭ್ಯರ್ಥಿ – ಕಾಗೋಡು ತಿಮ್ಮಪ್ಪ, 87 ಕ್ಷೇತ್ರ – ಸಾಗರ (80 ದಾಟಿದವರು ಐವರು ಇದ್ದಾರೆ)
* ಕಿರಿಯ ಅಭ್ಯರ್ಥಿ – ಎಸ್. ಅಶ್ವಿನಿ, 26 ವರ್ಷ – ಕೆಜಿಎಫ್

ಇನ್ನು, ರಾಜ್ಯದಲ್ಲಿ ಸರಿ ಸುಮಾರು 7 ಕೋಟಿ ಜನಸಂಖ್ಯೆ ಇದೆ. ಅದರಲ್ಲಿ, ಮತದಾರರ ಸಂಖ್ಯೆ ಎಷ್ಟಿದೆ? ಸುಗಮ, ಶಾಂತ ಮತದಾನಕ್ಕಾಗಿ ಭದ್ರತಾ ಪಡೆಗಳು ಕೈಗೊಂಡಿರುವ ಭದ್ರತಾ ಕ್ರಮಗಳನ್ನು ನೋಡೋಣ..

* 5 ಕೋಟಿ 06 ಲಕ್ಷದ 90 ಸಾವಿರದ 538 – ಒಟ್ಟು ಮತದಾರರು
* 2 ಕೋಟಿ 56 ಲಕ್ಷದ 75 ಸಾವಿರದ 579 – ಪುರುಷ ಮತದಾರರು
* 2 ಕೊಟಿ 50 ಲಕ್ಷದ 09 ಸಾವಿರದ 904 – ಮಹಿಳಾ ಮರದಾರರು
* 15 ಲಕ್ಷದ 42 ಸಾವಿರ – ಮೊದಲ ಬಾರಿಗೆ ಓಟ್ ಮಾಡುತ್ತಿರುವವರು
* 56 ಸಾವಿರದ 696 – ಒಟ್ಟು ಮತಗಟ್ಟೆಗಳು
* 3 ಲಕ್ಷದ 56 ಸಾವಿರದ 552 – ಎಲೆಕ್ಷನ್ ಸಿಬ್ಬಂದಿ
* 76 ಸಾವಿರದ 110 – ವಿವಿಪ್ಯಾಟ್‍ಗಳು
* 82 ಸಾವಿರದ 157- ಭದ್ರತಾ ಸಿಬ್ಬಂದಿ

Comments

Leave a Reply

Your email address will not be published. Required fields are marked *