ರಾಜ್ಯಕ್ಕೆ ಬಿಜೆಪಿ ಗೆಲುವಿನ ಸೂತ್ರಧಾರ ಎಂಟ್ರಿ – ಆರ್ ಎಸ್‍ಎಸ್ ನಾಯಕರ ಜೊತೆ ರಾಮ್ ಮಾಧವ್ ಗುಪ್ತ ಸಭೆ

ಬೆಂಗಳೂರು: ತ್ರಿಪುರಾ ಮತ್ತು ಜಮ್ಮುಕಾಶ್ಮೀರದಲ್ಲಿ ಬಿಜೆಪಿ ಗೆಲುವಿನ ಸೂತ್ರಧಾರರಾಗಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಇದೀಗ ರಾಜ್ಯ ಚುನಾವಣಾ ಅಖಾಡಕ್ಕಿಳಿದಿದ್ದಾರೆ.

ರಾಜ್ಯ ಬಿಜೆಪಿ ನಾಯಕರಿಗೆ ಮಾಹಿತಿ ನಿಡದೇ ಆರ್ ಎಸ್‍ಎಸ್ ನಾಯಕರ ಜೊತೆ ಗುಪ್ತ ಸಭೆ ನಡೆಸಿದ್ದಾರೆ. ತಡರಾತ್ರಿವರೆಗೂ ನಡೆದ ಈ ಮಹತ್ವದ ಸಭೆಯಲ್ಲಿ ಚುನಾವಣೆ ಪ್ರಚಾರ ಕುರಿತಾಗಿ ಚರ್ಚಿಸಲಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಮೋದಿ ಭಾಗವಹಿಸುವ ಬೃಹತ್ ಸಮಾವೇಶ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ. ರಾಜ್ಯದಲ್ಲಿ ಸದ್ಯದ ವಿಪಕ್ಷಗಳ ಪ್ರಚಾರ ತಂತ್ರ ಕುರಿತು ಆರ್‍ಎಸ್‍ಎಸ್ ನಾಯಕರಿಂದ ಮಾಹಿತಿ ಪಡೆದಿದ್ದಾರೆ. ಬಹಿರಂಗ ಸಭೆ ಅವಧಿ ಮುಕ್ತಾಯ ದಿನಾಂಕದವರೆಗೆ ಕೈಗೊಳ್ಳಬೇಕಾದ ಪ್ರಚಾರ ತಂತ್ರ ಕುರಿತು ಚರ್ಚಿಸಿದ್ದು, ಇನ್ನು ಎರಡು ದಿನಗಳ ಕಾಲ ರಾಮ್ ಮಾಧವ್ ಅವರು ರಾಜ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *