ದೀಪಾವಳಿಗೆ ಮೊದಲೇ ದೋಸ್ತಿ ಸರ್ಕಾರ ಉರುಳೋದು ಸತ್ಯ: ಪ್ರಭಾಕರ್ ಕೋರೆ

ಬೆಳಗಾವಿ:  ದೋಸ್ತಿ ಸರ್ಕಾರ ಬಿದ್ದೋಗುತ್ತೆ ಅನ್ನುವ ಬಿಜೆಪಿಯವರ ಡೆಡ್‍ಲೈನ್ ಮತ್ತೆ ಮುಂದುವರಿದಿದೆ. ಭವಿಷ್ಯವಾಣಿ ನುಡಿದವರ ಸಾಲಿಗೆ ಈಗ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಸೇರ್ಪಡೆಯಾಗಿದ್ದಾರೆ. ದೀಪಾವಳಿಗೆ ಮೊದಲೇ ದೋಸ್ತಿ ಸರ್ಕಾರ ಉರುಳೋದು ಸತ್ಯ ಅಂತಿದ್ದಾರೆ.

ದೋಸ್ತಿ ಸರ್ಕಾರದ ಹಲವರು ನಮ್ಮ ಸಂಪರ್ಕದಲ್ಲಿದ್ದಾರೆ. ನಾವು ಸರ್ಕಾರ ಮಾಡೋದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ಹೇಳುವ ಮೂಲಕ ಆಪರೇಷನ್ ಕಮಲ ಮುಂದುವರಿದೇ ಇದೆ ಅಂತ ಪರೋಕ್ಷವಾಗಿ ಹೇಳಿದ್ದಾರೆ. ಅಲ್ಲದೆ ಬಿಜೆಪಿಯಿಂದ 30 ಕೋಟಿ ಆಫರ್ ಬಂದಿತ್ತು ಅಂದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಂಥವರನ್ನ ಬಹಳ ಮಂದಿಯನ್ನ ನೋಡಿದ್ದೇನೆ ಅಂದರು.

ಪಕ್ಷ ಸೇರುವಂತೆ ಬಿಜೆಪಿ ಮುಖಂಡರೇ ನನಗೆ ಫೋನ್ ಮಾಡಿ 30 ಕೋಟಿಯ ಆಫರ್ ನೀಡಿದ್ದರು. ಈ ವಿಚಾರವನ್ನು ನಮ್ಮ ಮುಖಂಡರ ಗಮನಕ್ಕೆ ತೆಗೆದುಕೊಂಡು ಬಂದೆ. ಬಿಜೆಪಿಯವರ ಮೆಸೇಜ್ ಗಳನ್ನು ಕೂಡ ನಮ್ಮ ಮುಖಂಡರಿಗೆ ತೋರಿಸಿದೆ. ಆ ಸಂದರ್ಭದಲ್ಲಿ ಡಾ. ಜಿ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆವಾಗ ಅವರ ಬಳಿ ಎಲ್ಲವನ್ನು ಹೇಳಿಕೊಂಡಿದ್ದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಶುಕ್ರವಾರ ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *