ಭರಾಟೆಯೊಂದಿಗೇ ಮದಗಜ ಘೀಳಿಟ್ಟ ಸದ್ದು!

ಶ್ರೀಮುರಳಿ ಇದೀಗ ಭರಾಟೆ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಭರ್ಜರಿ ಚೇತನ್ ನಿರ್ದೇಶನದ ಭರಾಟೆ ಚಿತ್ರದ ಬಹು ಭಾಗದ ಚಿತ್ರೀಕರಣ ರಾಜಸ್ಥಾನದಲ್ಲಿ ನಡೆದಿತ್ತು. ಇದೀಗ ಮಂಡ್ಯ ಸುತ್ತಮುತ್ತ ಇದರ ಚಿತ್ರೀಕರಣ ನಡೆಯುತ್ತಿದೆ. ಹೀಗೆ ಬಿಡುವಿರದೆ ಚಿತ್ರೀಕರಣ ನಡೆಯುತ್ತಿರೋ ಭರಾಟೆಯ ನಡುವೆಯೇ ಮದಗಜ ಘೀಳಿಟ್ಟ ಸದ್ದು ಕೇಳಿಸಿದೆ!

ಶ್ರೀಮುರುಳಿ ಭರಾಟೆ ಚಿತ್ರದ ಚಿತ್ರೀಕರಣದ ನಡುವಲ್ಲಿಯೇ ಮತ್ತೊಂದು ಚಿತ್ರಕ್ಕೂ ತಯಾರಿ ಆರಂಭಿಸಿದ್ದಾರೆ. ಅದು ಮದಗಜ!

 

ಯೋಗರಾಜ್ ಭಟ್ ಶಿಷ್ಯ ಮಹೇಶ್ ಅಯೋಗ್ಯ ಚಿತ್ರದ ಮೂಲಕ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಮಹೇಶ್ ಶ್ರೀಮುರಳಿಯವರಿಗೆ ಚಿತ್ರವೊಂದನ್ನು ನಿರ್ದೇಶನ ಮಾಡಲಿರೋ ಬಗ್ಗೆ ಸುದ್ದಿಯಾಗಿತ್ತು. ನಂತರ ಅದಕ್ಕೆ ಮದಗಜ ಅಂತ ಟೈಟಲ್ ಫಿಕ್ಸಾಗಿದ್ದರೂ ಇದು ಮುಂದಿನ ವರ್ಷ ಶುರುವಾಗಲಿರೋ ಪ್ರಾಜೆಕ್ಟ್ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಮದಗಜ ಚಿತ್ರದ ಸ್ಕ್ರಿಪ್ಟ್ ಸೇರಿದಂತೆ ಎಲ್ಲ ಕೆಲಸ ಕಾರ್ಯಗಳೂ ಅಂತಿಮ ಹಂತ ತಲುಪಿವೆ.

ಮದಗಜ ಚಿತ್ರಕ್ಕೂ ಮಂಜು ಮಾಸ್ತಿ ಅವರೇ ಸಂಭಾಷಣೆ ಬರೆಯಲಿದ್ದಾರಂತೆ. ಇನ್ನೇನು ಭರಾಟೆ ಮುಗಿಯೋ ಮುನ್ನವೇ ಈ ಕೆಲಸ ಪೂರ್ಣಗೊಳ್ಳುತ್ತದೆ. ಆ ಬಳಿಕ ಶ್ರೀ ಮುರಳಿ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *