ಕನ್ನಡದ ಬಾವುಟ ಹಾರಿಸಿಲ್ಲ- ನನ್ನ ಮಗನಿಗೆ ಪ್ರಶಸ್ತಿ ಬೇಡ

ಚಿಕ್ಕಮಗಳೂರು: ಕನ್ನಡದ ಬಾವುಟ ಹಾರಿಸಿಲ್ಲ, ಹೀಗಾಗಿ ನನ್ನ ಮಗನಿಗೆ ಪ್ರಶಸ್ತಿ ಬೇಡ ಎಂದು ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಯ ತಂದೆ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಶೃಂಗೇರಿ ತಾಲೂಕು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಯ ತಂದೆ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ.

ವಿದ್ಯಾರ್ಥಿ ಸಂಕೀರ್ತ್ 10ನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದಿದ್ದ. ಹೀಗಾಗಿ ತಾಲೂಕು ಆಡಳಿತ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲು ಮುಂದಾಗಿತ್ತು. ಆದರೆ ಕನ್ನಡ ಬಾವುಟ ಹಾರಿಸದ ಕಾರಣ ವಿದ್ಯಾರ್ಥಿಯ ತಂದೆ ಸಿಟ್ಟಿಗೆದ್ದಿದ್ದು, ಕನ್ನಡ ಬಾವುಟ ಹಾರಿಸದ ಕಾರಣ ನನ್ನ ಮಗನಿಗೆ ಪ್ರಶಸ್ತಿ ನೀಡುವುದು ಬೇಡ ಎಂದು ಹೇಳಿ ತಿರಸ್ಕರಿಸಿದ್ದಾರೆ.

ಇದೇ ವೇಳೆ ತಮ್ಮ ಪುತ್ರ ಅಂಕ ಗಳಿಸಲು ಸಹಕರಿಸಿದವರಿಗೆ ಧನ್ಯವಾದ ಹೇಳಿದ ಸಂಕೀರ್ತ್ ತಂದೆ ನವೀನ್ ಕುರುವಾನೆ, ಯಾವುದೇ ಕಾರಣಕ್ಕೂ ಪ್ರಶಸ್ತಿ ಸನ್ಮಾನ ಸ್ವೀಕರಿಸುವುದಿಲ್ಲ ಎಂದು ತಿರಸ್ಕರಿಸಿದ್ದಾರೆ.

ಚಿಕ್ಕಮಗಳೂರಿನ ನೇತಾಜಿ ಸುಭಾಷ್ ಚಂದ್ರ ಭೋಸ್ ಆಟದ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವದಂದು ಕನ್ನಡದ ಬಾವುಟವೇ ಇಲ್ಲದೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸಿ.ಟಿ.ರವಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಇದೇ ವೇಳೆ, ಕನ್ನಡ ರಾಜ್ಯೋತ್ಸವದಂದು ಕನ್ನಡ ಬಾವುಟ ಹಾರಿಸದ ಕುರಿತು ಪ್ರತಿಕ್ರಿಯಿಸಿದ ಅವರು, ಹಿಂದೆಯೂ ಕನ್ನಡ ಬಾವುಟವನ್ನು ಹಾರಿಸಿರಲಿಲ್ಲ. ಹಾಗಾಗಿ, ಈ ವರ್ಷವೂ ಹಾರಿಸಿಲ್ಲ. ಬಾವುಟ ಕಟ್ಟೋದು ಬೇರೆ, ಹಾರಿಸೋದು ಬೇರೆ. ಸರ್ಕಾರ ನಾಡ ಧ್ವಜ ಹಾರಿಸುವುದು ಬೇಡವೆಂದು ಆದೇಶಿಸಿರುವುದು ನನಗೆ ಗೊತ್ತಿಲ್ಲ. ನಾನು ನಾಡಿಗೆ ಒಂದೇ ಧ್ವಜ ಎಂದು ಹೇಳಿಲ್ಲ. ಸಾಂಸ್ಕøತಿಕವಾಗಿ ನಾನೂ ಕನ್ನಡ ಧ್ವಜವನ್ನು ಒಪ್ಪಿಕೊಂಡಿದ್ದೇನೆ ಮತ್ತು ಕನ್ನಡದ ಧ್ವಜವನ್ನು ಹಿಡಿದು ಕುಣಿದಿದ್ದೇನೆ ಎಂದರು.

Comments

Leave a Reply

Your email address will not be published. Required fields are marked *