ಸೀತಾರಾಮನದ್ದು ಅರ್ಥಪೂರ್ಣ ಕಲ್ಯಾಣ!

ಬೆಂಗಳೂರು: ನಿಖಿಲ್ ನಾಯಕನಾಗಿ ನಟಿಸಿರೋ ಸೀತಾರಾಮ ಕಲ್ಯಾಣ ಚಿತ್ರ ಬಿಡುಗಡೆಯಾಗಿದೆ. ಆರಂಭದಿಂದಲೂ ಭರ್ಜರಿ ಫ್ಯಾಮಿಲಿ ಎಂಟರ್ ಟೇನರ್ ಎಂಬ ಸುಳಿವಿನೊಂದಿಗೆ ಎಲ್ಲರನ್ನು ಈ ಸಿನಿಮಾ ಸೆಳೆದುಕೊಂಡಿತ್ತು. ಅಂಥಾ ಅಗಾಧ ನಿರೀಕ್ಷೆಯಿಟ್ಟುಕೊಂಡು ಥೇಟರು ಹೊಕ್ಕ ಪ್ರತೀ ಪ್ರೇಕ್ಷಕರನ್ನೂ ಸೀತಾರಾಮ ಖುಷಿಗೊಳಿಸಿದ್ದಾನೆ.

ಇಡೀ ಚಿತ್ರದಲ್ಲಿ ಪ್ರಧಾನವಾಗಿ ಗಮನ ಸೆಳೆಯುವಂತಿರೋದು ನಿರ್ದೇಶಕ ಎ ಹರ್ಷ ಅವರ ಜಾಣ್ಮೆ ಬೆರೆತ ಕಸುಬುದಾರಿಕೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಮುದ ನೀಡುವಂತೆ, ಸಿಎಂ ಮಗನೇ ನಾಯಕನಾದ್ದರಿಂದ ಆ ದೃಷ್ಟಿಯಲ್ಲಿಯೂ ಕುಂದುಂಟಾಗದಂತೆ ಮತ್ತು ಯಾವುದನ್ನೂ ಉದ್ದೇಶಪೂರ್ವಕವಾಗಿ ತುರುಕಲಾಗಿದೆ ಎಂಬಂಥಾ ಭಾವವೇ ಕಾಡದಂತೆ ಹರ್ಷ ಇಡೀ ಚಿತ್ರವನ್ನ ರೂಪಿಸಿದ್ದಾರೆ.

ಸೀತಾರಾಮ ಕಲ್ಯಾಣ ದೊಡ್ಡ ಕ್ಯಾನ್ವಾಸಿನ ಸಿನಿಮಾ. ನಿಖಿಲ್ ಇಲ್ಲಿ ಆರ್ಯ ಎಂಬ ಲವಲವಿಕೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಆರ್ಯ ಗೆಳೆಯನ ಮದುವೆಯ ನಿಮಿತ್ತವಾಗಿ ಆತನ ದೊಡ್ಡ ಕುಟುಂಬವೊಂದರ ಪರಿಸರಕ್ಕೆ ಎಂಟ್ರಿ ಕೊಡುತ್ತಾನೆ. ಮದುವೆ ಮುಗಿಯೋ ಹೊತ್ತಿಗೆಲ್ಲ ಆರ್ಯನಿಗೆ ಆ ದೊಡ್ಡ ಮನೆ ಯಜಮಾನನ ಮಗಳ ಮೇಲೆಯೇ ಪ್ರೀತಿ ಮೂಡಿ ಬಿಟ್ಟಿರುತ್ತೆ. ನಂತರವೂ ಪವಾಡವೆಂಬಂತೆ ಆ ಹುಡುಗಿಯೊಂದಿಗೇ ಆರ್ಯನ ಪ್ರೇಮ ಮುಂದುವರೆಯುತ್ತೆ. ಆದರೆ ಈ ಪ್ರೀತಿಯ ಹಿನ್ನೆಲೆಯಲ್ಲಿಯೇ ಆ ಎರಡು ಕುಟುಂಬಗಳ ನಂಟು, ದ್ವೇಷದ ಪ್ಲ್ಯಾಶ್ ಬ್ಯಾಕೂ ತೆರೆದುಕೊಳ್ಳುತ್ತೆ. ಅದೆಂಥಾದ್ದೆಂಬುದನ್ನ ಸೀತಾರಾಮ ಕಲ್ಯಾಣವನ್ನ ನೋಡಿಯೇ ತಿಳಿದುಕೊಳ್ಳೋದು ಉತ್ತಮ.

ಇನ್ನುಳಿದಂತೆ ಫ್ಯಾಮಿಲಿಯಾಚೆಗೆ ಜನನಾಯಕನಾಗಿಯೂ ನಿಖಿಲ್ ಮಿಂಚಿದ್ದಾರೆ. ರೈತಪರವಾದ ಸೀನುಗಳೂ ಸ್ಫೂರ್ತಿದಾಯಕವಾಗಿವೆ. ರಘು ನಿಡುವಳ್ಳಿಯವರ ಸಂಭಾಷಣೆಯೂ ಕಥೆಯ ಓಘಕ್ಕೆ ಪೂರಕವಾಗಿದೆ. ಸಾಹಸ, ಸೆಂಟಿಮೆಂಟು ಸೇರಿದಂತೆ ಎಲ್ಲವೂ ಬೆರಗಾಗುವಂತಿವೆ. ಶರತ್ ಕುಮಾರ್, ರವಿಶಂಕರ್, ಮಧುಬಾಲಾ ಮುಂತಾದವರೂ ಕೂಡಾ ಬೇರೆಯದ್ದೇ ಥರದ ಪಾತ್ರಗಳಲ್ಲಿ ಆವರಿಸಿಕೊಳ್ಳುತ್ತಾರೆ. ರಚಿತಾ ಕೂಡಾ ಮುದ್ದಾಗಿ ನಟಿಸಿದ್ದಾರೆ. ನಿಖಿಲ್ ಎಲ್ಲ ರೀತಿಯಲ್ಲಿಯೂ ಫುಲ್ ಮಾಕ್ರ್ಸ್ ಪಡೆದುಕೊಳ್ಳುತ್ತಾರೆ. ಸಂಗೀತ, ಸಾಹಸ, ಛಾಯಾಗ್ರಹಣ… ಹೀಗೆ ಎಲ್ಲ ವಿಭಾಗಗಳಲ್ಲಿಯೂ ಹೊಸತನವಿದೆ. ಅದುವೇ ಸೀತಾರಾಮ ಕಲ್ಯಾಣವನ್ನು ಮತ್ತಷ್ಟು ಆಕರ್ಷಕವಾಗಿದೆ.

https://www.youtube.com/watch?v=GaXuYAfqGQg

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *