ಕರ್ಮದ ಬಗ್ಗೆ ಎಚ್ಚರಿಕೆ ನೀಡ್ತಿದೆ ‘ಕಾಲಾಂತಕ’

ಪ್ರಯೋಗಾತ್ಮಕ ಮತ್ತು ವಿಭಿನ್ನ ಕಥಾ ವಸ್ತು ಹೊಂದಿರುವ ಸಿನಿಮಾ ‘ಕಾಲಾಂತಕ’. ಮಾರ್ಕಂಡೇಯನ ಪುರಾಣದಲ್ಲಿ ಶಿವನನ್ನು ಕಾಲಾಂತಕ ಎಂಬ ಹೆಸರಿನಿಂದ ಕರೆಯುತ್ತಾರೆ. ಇದೋಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸದ್ದು ಮಾಡಿದ್ದು, ಕುತೂಹಲ ಹುಟ್ಟಿಸಿದೆ. ಸದ್ಯ ‘ಕಲಾಂತಕ’ ಸಿನಿಮಾದ ಟೀಸರ್ ರಿಲೀಸ್ ಮಾಡಿರುವ ಚಿತ್ರತಂಡ ಮನುಷ್ಯನ ಪಾಪ ಪ್ರಜ್ಞೆಯನ್ನು ನೆನಪಿಸುತ್ತಿದೆ.

ಆ ಕತ್ತಲ ರಾತ್ರಿ, ಜೋರು ಸುಳಿವ ಮಳೆಯಲ್ಲಿ ಪಾದದ ಗುರುತು ಕಾಣಲ್ಲ. ಆದ್ರೆ ಮಾಡಿದ ಪಾಪ ಕಾಡದೆ ಬಿಡಲ್ಲ. ದೇಹ ಮತ್ತು ದ್ವೇಷ ಎರಡು ಭಿನ್ನವಾಗಿರುತ್ತೆ ಎಂಬ ವಿಷಯವನ್ನ ಸಿನಿಮಾದ ಟೀಸರ್ ನಲ್ಲಿ ತೋರಿಸಲಾಗಿದೆ. ಸಿನಿಮಾ ಟೀಸರ್ ನೋಡಿದಾಗಿನಿಂದ ಮುಂದಿನ ಅಪ್ ಡೇಟ್ ಗಾಗಿ ಕಾಯುವಂತ ಕುತೂಹಲ ಹುಟ್ಟಿದೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಕಾಲಾಂತಕ’ ಚಿತ್ರ, ಈಗಾಗಲೇ ಸದ್ದಿಲ್ಲದೆ ಚಿತ್ರೀಕರಣವನ್ನು ಪೂರ್ಣಗೊಳಿಸಿ, ರಿಲೀಸ್‍ಗೆ ರೆಡಿಯಾಗಿದೆ. ಈ ಹಿಂದೆ ‘ಜ್ವಲಂತಂ’ ಎನ್ನುವ ಹೆಸರಿನ ಚಿತ್ರವನ್ನು ನಿರ್ದೇಶಿಸಿದ್ದ ಅಂಬರೀಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಸೇರಿದಂತೆ ಸುಮಾರು 40 ದಿನಗಳ ಕಾಲ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಸದ್ಯ ಟೀಸರ್ ಮೂಲಕ ಸದ್ದು ಮಾಡುತ್ತಿರುವ ‘ಕಾಲಾಂತರ’ದಲ್ಲಿ ಯಶ್ವಂತ್ ಶೆಟ್ಟಿ, ಕಾರ್ತಿಕ್ ಸಾಮಗ, ಸುಶ್ಮಿತಾ ಜೋಷಿ, ಶ್ರೀಧರ್, ಧಮೇಂದ್ರ ಅರಸ್, ಪ್ರಕಾಶ್, ಕಡ್ಡಿಪುಡಿ ಚಂದ್ರು ಅನೇಕರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಲೇಶ್ ಛಾಯಾಗ್ರಹಣ, ಹರೀಶ್ ಕೊಮ್ಮೆ ,ಫಿನ್ನಿ ಕುರಿಯನ್ ಸಂಗೀತ ಸಂಯೋಜಿಸಿದ್ದಾರೆ. ಭಾಸ್ಕರ್ ಮೂವೀ ಲೈನ್ಸ್ ಬ್ಯಾನರ್‍ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಕೆಜಿಎಫ್ ಸಿನಿಮಾದ ಜೂನಿಯರ್ ಯಶ್ ತಾಯಿ ಪಾತ್ರ ಮಾಡಿದ್ದ ಅರ್ಚನಾ ಜೋಯಿಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *