ಕಾಗೇರಿ ವಿರುದ್ಧ ಮಾಧ್ಯಮಗಳಿಂದ ಪ್ರತಿಭಟನೆ

ಬೆಂಗಳೂರು: ವಿಧಾನಸಭೆ ಕಲಾಪಕ್ಕೆ ಮಾಧ್ಯಮಗಳ ಮೇಲೆ ಹೇರಲಾದ ನಿರ್ಬಂಧವನ್ನು ಖಂಡಿಸಿ ಮಾಧ್ಯಮಗಳ ಪ್ರಮುಖರು ಸಿಲಿಕಾನ್ ಸಿಟಿಯಲ್ಲಿ ಪ್ರತಿಭಟನೆ ನಡೆಸಿದರು.

ಖಾಸಗಿ ಟಿವಿ ಮಾಧ್ಯಮಗಳ ನೇರಪ್ರಸಾರ ಮತ್ತು ಖಾಸಗಿ ಮಾಧ್ಯಮಗಳ ಫೋಟೋಗ್ರಾಫರ್ ಗಳಿಗೆ ನಿಷೇಧ ಹೇರಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಿರ್ಧಾರವನ್ನು ಖಂಡಿಸಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ವತಿಯಿಂದ ಮೌರ್ಯ ಸರ್ಕಲ್‍ನಲ್ಲಿ ಇರುವ ಗಾಂಧಿ ಪ್ರತಿಮೆ ಎದುರು ಆಯೋಜನೆಗೊಂಡಿದ್ದ ಪ್ರತಿಭಟನೆಯಲ್ಲಿ ಟಿವಿ ಮತ್ತು ಮುದ್ರಣ ಮಾಧ್ಯಮದ ಸಂಪಾದಕರು, ಪತ್ರಕರ್ತರು ಭಾಗವಹಿಸಿ ಸರ್ಕಾರದ ನಡೆಯನ್ನು ಖಂಡಿಸಿದರು.

ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಿಎಂ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು. ಮಾಧ್ಯಮದ ಮಿತ್ರರು ಸಾಂಕೇತಿಕ ಪ್ರತಿಭಟನೆ ಮಾಡುತ್ತಿದ್ದೀರಿ. ಈ ರೀತಿಯ ತೀರ್ಮಾನ ಯಾವ ಸಂದರ್ಭದಲ್ಲಿಯೂ ಆಗಿರಲಿಲ್ಲ. ಮಾಧ್ಯಮಗಳನ್ನ ಹತ್ತಿಕ್ಕುವ ಕೆಲಸವನ್ನ ನಾನು ಸಿಎಂ ಆಗಿದ್ದಾಗ ಮಾಡಿರಲಿಲ್ಲ. ಅಧಿವೇಶನದಲ್ಲಿ ನಡೆಯುವುದನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡುತ್ತೀರಿ. ನಾಲ್ಕನೇ ಪಿಲ್ಲರ್ ಗೆ ಮುಕ್ತ ಅವಕಾಶ ಇರಬೇಕು. ಆದರೆ ಅದನ್ನು ಈ ಸರ್ಕಾರ ಮೊಟಕು ಮಾಡಿದೆ. ಇವತ್ತಿನ ಅಧಿವೇಶನದಲ್ಲಿ ಮಾಧ್ಯಮವನ್ನ ಬಹಿಷ್ಕರಿಸಿದ್ದರ ಬಗ್ಗೆ ಮಾತನಾಡುತ್ತೇನೆ. ಸ್ಪೀಕರ್ ಗೆ ಈ ಮಾಧ್ಯಮ ನಿಷೇಧವನ್ನ ಹಿಂಪಡೆಯಲು ಒತ್ತಾಯ ಮಾಡುವುದಾಗಿ ಭರವಸೆ ನಿಡಿದರು.

Comments

Leave a Reply

Your email address will not be published. Required fields are marked *