ಸಲ್ಮಾನ್ ಖಾನ್ ಕಂಡರೆ ಜೋಧಪುರ ಪೊಲೀಸರು ಗಢ..ಗಢ..!

ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಖಾನ್ ಬಗ್ಗೆ ಜೋಧಪುರ ಪೊಲೀಸರು ಯಾವ ರೀತಿ ಭಯ ಪಡ್ತಾರೆ ಅನ್ನೋದು ಕನ್ನಡಿಗರರೊಬ್ಬರ ಆರ್ ಟಿಐ ಮಾಹಿತಿಯಿಂದ ಬಹಿರಂಗವಾಗಿದೆ.

ಸಲ್ಮಾನ್ ಜೈಲಲ್ಲಿ ಇದ್ದಾಗ ಯಾರೆಲ್ಲ ವಿಸಿಟರ್ಸ್ ಬಂದಿದ್ರು, ಎಷ್ಟು ಜನ ಬಂದಿದ್ರು, ಸಲ್ಮಾನ್‍ಗೆ ಯಾವ ರೀತಿ ವ್ಯವಸ್ಥೆಯನ್ನು ಜೈಲೊಳಗೆ ಮಾಡಲಾಗಿತ್ತು ಅಂತಾ ನರಸಿಂಹಮೂರ್ತಿಯವರು ಜೋಧಪುರ ಜೈಲಾಧಿಕಾರಿಗಳಿಗೆ ಮಾಹಿತಿ ಕೇಳಿದ್ರು.

ನರಸಿಂಹಮೂರ್ತಿಯವರು ಕೇಳಿದ ಮಾಹಿತಿಗೆ ಪೊಲೀಸರು ಉತ್ತರ ಕೊಟ್ಟಿಲ್ಲ. ಮತ್ತೆ ಮೇಲ್ಮನವಿ ಹಾಕಿದಾಗ ಕಾರಾಗೃಹ ಅಧಿಕಾರಿಗಳು, ನೇರವಾಗಿ ಸಲ್ಮಾನ್ ಖಾನ್‍ಗೆ ಪತ್ರ ಬರೆದು ನೀವು ಜೈಲಿನಲ್ಲಿರುವಾಗ ಮಾಹಿತಿಯನ್ನು ಕೇಳಿದ್ದಾರೆ. ಕೊಡಬಹುದಾ ಸಾರ್ ಅಂತಾ ಮಾಹಿತಿ ಕೇಳಿದವರ ವಿಳಾಸವನ್ನು ಬಹಿರಂಗ ಪಡಿಸಿ ಸಲ್ಮಾನ್‍ಗೆ ಕಳುಹಿಸಿದ್ದಾರೆ.

ಇದು ಕಾನೂನು ಬಾಹಿರವಾಗಿದ್ದು, ಜೈಲಾಧಿಕಾರಿಗಳಿಗೆ ಕೇಳಿದ ಮಾಹಿತಿಯನ್ನು ಖೈದಿಯಾಗಿದ್ದವರ ಬಳಿ ಕೇಳಿ ಉತ್ತರ ಕೊಡುತ್ತೇವೆ ಅಂದಿದ್ದು ಇತಿಹಾಸ. ಸಲ್ಮಾನ್ ಪವರ್ ಬಗ್ಗೆ ಪ್ರಶ್ನಿಸಿ, ಜೋಧಪುರ ಗೃಹ ಸಚಿವರಿಗೂ ದೂರು ಕೊಡಲಾಗಿದೆ. ಮಾಹಿತಿ ನೀಡಿಲ್ಲವಾದ್ರೇ ಹೈಕೋರ್ಟ್ ಮೆಟ್ಟಿಲೇರೋದಾಗಿ ಮೂರ್ತಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *