ಕೊರೊನಾ ತಡೆಗೆ ಭಾನುವಾರ ಜನತಾ ಕರ್ಫ್ಯೂ – ಏನಿರುತ್ತೆ? ಏನಿರಲ್ಲ?

ಬೆಂಗಳೂರು: ಮನೆಯಂಗಳಕ್ಕೆ ಬಂದು ಬಾಗಿಲು ಬಡಿಯುತ್ತಿರುವ ಕೊರೊನಾ ಮಾರಿ ಹೊಡೆದೊಡಿಸಲು ಪ್ರಧಾನಿ ಮೋದಿ, ಜನರಿಂದ ಜನರಿಗಾಗಿ, ಜನರಿಗೋಸ್ಕರ ಪ್ರಯೋಗಿಸಿರುವ ಭಾನುವಾರದ ಜನತಾ ಕರ್ಫ್ಯೂ ಯಶಸ್ವಿಗೊಳಿಸಲು ಇಡೀ ಕರುನಾಡು ಕಂಕಣ ತೊಟ್ಟಿದೆ.

ಬೆಂಗಳೂರಿಗರನ್ನು ಸೇರಿದಂತೆ ಇಡೀ ರಾಜ್ಯದ ಜನರನ್ನು ಮಾತನಾಡಿಸಿದಾಗ, ನಾವು ಜನತಾ ಕರ್ಫ್ಯೂನಲ್ಲಿ ಪಾಲ್ಗೊಳ್ಳುತ್ತೇವೆ. ಮನೆಯಲ್ಲಿ ಇದ್ದು ಜನತಾ ಕರ್ಫ್ಯೂಗೆ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದಾರೆ. ಭಾನುವಾರದ ಜನತಾ ಕರ್ಫ್ಯೂಗೆ ರಾಜ್ಯದ ಸಾವಿರಾರು ಸಂಘಟನೆಗಳು, ಬೆಂಬಲ ಘೋಷಿಸಿವೆ.

ಒಂದು ದಿನದ ಮಟ್ಟಿಗೆ ತಮ್ಮೆಲ್ಲಾ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡುತ್ತೇವೆ. ಪ್ರಧಾನಿ ಮೋದಿ ಹೇಳುತ್ತಿರುವುದು ನಮ್ಮ ಒಳ್ಳೆಯದಕ್ಕೆ ಎಂದು ಸಂಘ ಸಂಸ್ಥೆಗಳ ಮುಖಂಡರು ಹೇಳಿಕೆ ನೀಡಿದ್ದಾರೆ. ಹೀಗಾಗಿ ಭಾನುವಾರದ ಜನತಾ ಕರ್ಫ್ಯೂ ಯಶಸ್ವಿ ಆಗೋದು ಬಹುತೇಕ ಖಚಿತವಾಗಿದೆ.

ಭಾನುವಾರ ಏನೇನು ಇರಲ್ಲ:
* ದರ್ಶಿನಿ, ಕೆಫೆ, ಹೋಟೆಲ್, ಸ್ಟಾರ್ ಹೋಟೆಲ್
* ನಗರ ಪೊಲೀಸ್ ಕಮೀಷನರ್ ಕಚೇರಿ (ಕಂಟ್ರೋಲ್ ರೂಮ್ ಹೊರತುಪಡಿಸಿ ಬೇರೆಲ್ಲಾ ಕಚೇರಿ ಬಂದ್)
* ಬಿಎಂಟಿಸಿ (ಶೇ.20ರಷ್ಟು ಮಾತ್ರ ಸೇವೆ), ಕೆಎಸ್ಆರ್‌ಟಿಸಿ, ಲಾರಿ
* ನಮ್ಮ ಮೆಟ್ರೋ
* ರೈಲು ಸೇವೆ (ನಾಳೆ ಮಧ್ಯರಾತ್ರಿಯಿಂದ ಭಾನುವಾರ ರಾತ್ರಿ 10 ಗಂಟೆಯವರೆಗೆ)
* ಆಟೋ, ಓಲಾ, ಊಬರ್


* ಎಪಿಎಂಸಿ, ತರಕಾರಿ ಮಾರ್ಕೆಟ್ (ತರಕಾರಿ, ಹೂವು, ಹಣ್ಣು)
* ಕೆ.ಆರ್ ಮಾರ್ಕೆಟ್
* ಆಭರಣ ಮಳಿಗೆ
* ಬಟ್ಟೆ ಅಂಗಡಿ
* ಬಾರ್, ವೈನ್ ಶಾಪ್
* ಪೀಣ್ಯಾ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳು
* ದೇವಸ್ಥಾನ
* ಚಿತ್ರೋದ್ಯಮದ ಶೂಟಿಂಗ್, ಚಟುವಟಿಕೆ
* ಇಂದಿರಾ ಕ್ಯಾಂಟೀನ್

ಜನತಾ ಕರ್ಫ್ಯೂ- ಏನೇನು ಇರುತ್ತೆ?
* ಅಂಬುಲೆನ್ಸ್ ಸೇವೆ
* ಆಸ್ಪತ್ರೆ, ಮೆಡಿಕಲ್ ಶಾಪ್
* ಪೆಟ್ರೋಲ್ ಬಂಕ್ ( ಶಿವಮೊಗ್ಗ, ಮೈಸೂರಿನಲ್ಲಿ ಮಾತ್ರ ಬಂದ್)
* ಹಾಲು, ಪೇಪರ್

 

Comments

Leave a Reply

Your email address will not be published. Required fields are marked *