ಜನಾರ್ದನ ರೆಡ್ಡಿ ಸಲೈಂಟಾಗಿದ್ದಾರೆ, ಅವರನ್ನು ವೈಲೆಂಟ್ ಮಾಡ್ಬೇಡಿ: ಹೆಚ್‍ಡಿಕೆಗೆ ಸೋಮಶೇಖರರೆಡ್ಡಿ ಎಚ್ಚರಿಕೆ!

ಬಳ್ಳಾರಿ: ಮಾಜಿ ಸಚಿವ ಜನಾರ್ದನರೆಡ್ಡಿ ಸಲೈಂಟ್ ಆಗಿದ್ದಾರೆ, ಅವರನ್ನು ವೈಲೆಂಟ್ ಮಾಡಬೇಡಿ. ಜನಾರ್ದನರೆಡ್ಡಿಯನ್ನು ಕೆಣಕಿದ್ರೆ ಸರಿ ಇರಲ್ಲ ಎಂದು ಮಾಜಿ ಶಾಸಕ ಸೋಮಶೇಖರರೆಡ್ಡಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಜನಾರ್ದನ ರೆಡ್ಡಿ ಮೇಲಿನ ಕೇಸ್ ಹಿಂಪಡೆಯಲು ಬಿಜೆಪಿಗೆ 500 ಕೋಟಿ ರೂ. ಹಣ ನೀಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಈ ಸಂಬಂಧ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿ ಪ್ರತಿಕ್ರಿಯಿಸಿ, ಮಾಜಿ ಸಿಎಂ ಕುಮಾರಸ್ವಾಮಿ ಸುಳ್ಳು ಆರೋಪ ಮಾಡಬಾರದು. ಕುಮಾರಸ್ವಾಮಿ ಹೇಳಿಕೆ ಸಣ್ಣತನದಿಂದ ಕೂಡಿದೆ ಎಂದು ಹೇಳಿದ್ರು.

ಕೊನೆಗೆ ಕುಮಾರಸ್ವಾಮಿಗೆ ಕೈ ಮುಗಿದು ಕೇಳುವೆ. ಜನಾರ್ದನರೆಡ್ಡಿ ಅವರು ತುಂಬಾನೇ ಸೈಲೆಂಟ್ ಆಗಿದ್ದಾರೆ. ನಾವು ಕುಟುಂಬಸ್ಥರೆಲ್ಲರೂ ಸಂತೋಷವಾಗಿದ್ದೇವೆ. ಕುಮಾರಸ್ವಾಮಿ ಅವರು ಮಾತನಾಡುವ ಮುನ್ನ ಯೋಚನೆ ಮಾಡಿ ಮಾತನಾಡಬೇಕು. ನಾನು ಅವರನ್ನು ಕೈ ಮಗಿದು ಕೇಳುತ್ತೇನೆ ಅಂತ ಸೋಮಶೇಖರರೆಡ್ಡಿ ಹೇಳಿದ್ರು.

ಇದನ್ನೂ ಓದಿ: ಬಿಜೆಪಿ ಎಲೆಕ್ಷನ್‍ಗೆ ಜನಾರ್ದನ ರೆಡ್ಡಿಯಿಂದ 500 ಕೋಟಿ ಹಣ:ಎಚ್‍ಡಿಕೆ ಬಾಂಬ್

Comments

Leave a Reply

Your email address will not be published. Required fields are marked *