ಮಹಿಳೆಯರಿಂದ ಪಾದ ತೊಳೆಸಿಕೊಂಡ ಜಾರ್ಖಂಡ್ ಸಿಎಂ: ವೈರಲ್ ವಿಡಿಯೋ ನೋಡಿ

ಜೆಮ್‍ಶ್ಷೆಡ್‍ಪುರ: ಗುರು ಪೂರ್ಣಿಮಾ ಮಹೋತ್ಸವದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರು ಜಾರ್ಖಂಡ್ ಮುಖ್ಯಮಂತ್ರಿ ರಘುವರ್ ದಾಸ್ ಅವರ ಪಾದಗಳನ್ನು ತೊಳೆದಿರುವ ವಿಡಿಯೋವೊಂದು ವೈರಲ್ ಆಗಿದೆ.

ಜಾರ್ಖಂಡ್‍ದ ಜೆಮ್‍ಶ್ಷೆಡ್‍ಪುರದ ಬ್ರಹ್ಮ ಲೋಕ ಧಾಮದಲ್ಲಿ ನಡೆಯುತ್ತಿರುವ `ಗುರು ಮಹೋತ್ಸವ’ ಸಮಾರಂಭದಲ್ಲಿ ಇಬ್ಬರು ಮಹಿಳೆಯರು ಮುಖ್ಯಮಂತ್ರಿ ರಘುವರ್ ದಾಸ್ ಅವರ ಪಾದಗಳನ್ನು ತೊಳೆದಿದ್ದಾರೆ.

ರಘುವರ್ ದಾಸ್ ಅವರು ಕೈ ಮುಗಿದುಕೊಂಡು ಬರುವಾಗ ದೊಡ್ಡ ತಟ್ಟೆಯೊಂದರಲ್ಲಿ ನಿಲ್ಲಿಸಿ ನೀರು, ಹೂವನ್ನು ಅವರ ಪಾದಕ್ಕೆ ಹಾಕಿ ತೊಳೆದಿದ್ದಾರೆ. ಮುಖ್ಯಮಂತ್ರಿ ರಘುವರ್ ದಾಸ್ ಅವರು ಅಲ್ಲಿಯ ಜನರಿಗೆ ಕೈ ಮುಗಿದುಕೊಂಡು ಬರುವ ದೃಶ್ಯ ವಿಡಿಯೋದಲ್ಲಿದೆ.

Comments

Leave a Reply

Your email address will not be published. Required fields are marked *