`ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ’ ಮೇ 10ಕ್ಕೆ ಬಿಡುಗಡೆ

ಸಾಮಾಜಿಕ ಕಳಕಳಿ ಇರುವ ಚಿತ್ರ `ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ’ ಮೇ 10ಕ್ಕೆ ಬಿಡುಗಡೆಯಾಗಲಿದೆ. ವಿಶೇಷ ಚೇತನರು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕ ಎಚ್ ಸೋಮಶೇಖರ್ ಅವರ ಹೆತ್ತವರು ಅಂಗವೈಕಲ್ಯ ಹೊಂದಿದವರು. ನಿರ್ದೇಶಕ ರಾಜ ರವಿ ವರ್ಮಾ ಸಹಾ ವಿಕಲಚೇತನರಾಗಿದ್ದಾರೆ. ಚಿತ್ರದ ಪ್ರಮುಖ ಪಾತ್ರಧಾರಿಗಳಲ್ಲಿ ಭೋಗಪುರದ ಅಂಧ ಬಾಲಕ ಮಾಸ್ಟರ್ ಮಹೇಶ್ ಶುಕ್ಲಾಚಾರಿ ಪಾತ್ರಧಾರಿಯಾಗಿದ್ದಾನೆ. ಜಕಣಾಚಾರಿ ಪಾತ್ರಧಾರಿಯಾಗಿರುವ ಲಿಂಗರಾಜಪುರದ ಹುಡುಗ ಮಾಸ್ಟರ್ ಜಯ್ಯದ್ ಕೂಡಾ ವಿಶೇಷಚೇತನರಾಗಿದ್ದಾರೆ.

ನಿರ್ದೇಶಕ ರಾಜ ರವಿ ವರ್ಮಾ ಈ ಚಿತ್ರಕ್ಕೆ `ಎಂಡೋಸಲ್ಫಾನ್’ ವಿಷ ರಾಸಾಯನಿಕದಿಂದ ಅಂಗವೈಕಲ್ಯಕ್ಕೆ ತುತ್ತಾಗಿರುವವರ ಗಂಭೀರ ವಿಚಾರವನ್ನು ಪ್ರಧಾನವಾಗಿಟ್ಟುಕೊಂಡು ಕಥೆ, ಚಿತ್ರಕಥೆ ರಚಿಸಿದ್ದಾರೆ. ಮಾಸ್ಟರ್ ವಿನಯ್ ಸೂರ್ಯ, ಮಾಸ್ಟರ್ ಕಿರಣ್, ಮುನಿ, ಮೂಗು ಸುರೇಶ್, ನೀನಾಸಮ್ ಅಶ್ವಥ್, ಮನದೀಪ್ ರಾಯ್, ಗಿರೀಶ್ ಶೆಟ್ಟಿ, ಶಿವು, ಮೀನ, ಪಂಕಜ ರವಿಶಂಕರ್, ಮಂಜು ಸೂರ್ಯ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ರಾಜ್ ಪ್ರಿಯ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಎ ರಾಮು. ಸಾಮ್ರಾಟ್ ಎಸ್ ಛಾಯಾಗ್ರಹಣ, ಸಿ ಜೆ ಅನಿಲ್ ಸಂಗೀತ, ಡಾ ವಿ.ನಾಗೇಂದ್ರ ಪ್ರಸಾದ್ ಮತ್ತು ರಾಜ ರವಿ ವರ್ಮ ಗೀತ ಸಾಹಿತ್ಯ ಒದಗಿಸಿದ್ದಾರೆ.

Comments

Leave a Reply

Your email address will not be published. Required fields are marked *