ಗಣಪತಿ ವಿಸರ್ಜನೆ ವೇಳೆ ಹಾಡಿ ರಂಜಿಸಿದ ಮಸಾಲೆ ಜಯರಾಮ್, ಜಗ್ಗೇಶ್

ತುಮಕೂರು: ಗಣೇಶ ವಿಸರ್ಜನೆ ಕಾರ್ಯಕ್ರಮವೊಂದರಲ್ಲಿ ನಟ ಜಗ್ಗೇಶ್ ಹಾಗೂ ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಹಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಇಬ್ಬರು ಗಣ್ಯರು ತಮ್ಮ ಕಂಠಸಿರಿ ಮೂಲಕ ಹಾಡಿ ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ. ಜಗ್ಗೇಶ್ ಅವರು ಕನ್ನಡ ಸಿನಿಮಾದ ‘ಬಾರೇ ಬಾರೇ’ ಎಂಬ ಹಾಡನ್ನು ಹಾಡಿದರೆ, ಮಸಾಲೆ ಜಯರಾಮ್ ರಾಮನ ಅವತಾರ ಹಾಡನ್ನ ಹಾಡಿ ನೆರೆದವರು ತಲೆದೂಗುವಂತೆ ಮಾಡಿದ್ದಾರೆ.

ಇಬ್ಬರೂ ಗಣ್ಯರು ತಲಾ ಎರಡೆರಡು ಹಾಡನ್ನ ಹಾಡಿದ್ದು, ಸುಮಾರು ಅರ್ಧಗಂಟೆಗಳ ಕಾಲ ಅಭಿಮಾನಿಗಳನ್ನು ರಂಜಿಸಿದರು. ಇಬ್ಬರು ನಾಯಕರ ಹಾಡಿಗೆ ತಲೆದೂಗಿದ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಹೊಡೆದು ಒನ್ಸ್ ಮೋರ್ ಒನ್ಸ್ ಮೋರ್ ಎಂದು ಕೂಗಿದರು. ಮಸಾಲೆ ಜಯರಾಮ್ ಮೂಲತಃ ನಾಟಕ ಕಲಾವಿದರಾಗಿದ್ದರಿಂದ ಹಾಡು ಹಾಡಿದ ಅನುಭವ ಇತ್ತು. ಹೀಗಾಗಿ ಜಗ್ಗೇಶ್ ಅವರಿಗೆ ಜಯರಾಮ್ ಅವರು ಖುಷಿಯಿಂದ ಕಾರ್ಯಕ್ರಮದಲ್ಲಿ ಸಾಥ್ ನೀಡಿದರು.

Comments

Leave a Reply

Your email address will not be published. Required fields are marked *