ಬೆಳಗಾವಿ: ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ಕಾರು ಇಂದು ಜಿಲ್ಲೆಯ ಧರ್ಮನಾಥ ಸರ್ಕಲ್ ಬಳಿ ಅಪಘಾತಕ್ಕಿಡಾಗಿದೆ.
ಧರ್ಮನಾಥ ಸರ್ಕಲ್ ಬಳಿ ಜಗದೀಶ್ ಶೆಟ್ಟರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಶೆಟ್ಟರ್ ಅವರ ಕಾರಿಗೆ ಹಿಂದಿನಿಂದ ಇನ್ನೊವಾ ಕಾರೊಂದು ಬಂದು ಗುದ್ದಿದೆ. ಸದ್ಯ ಅಪಘಾತದಿಂದ ಜಗದೀಶ್ ಶೆಟ್ಟರ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತದಿಂದ ಮಾಜಿ ಸಿಎಂ ಅವರ ಕಾರು ಸ್ವಲ್ಪ ಜಖಂಗೊಂಡಿದ್ದು, ಯಾರಿಗೂ ಯಾವುದೇ ಅಪಾಯವಾಗಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply