ಐಟಿ‌ ದಾಳಿಗೆ ನಾವು ಹೆದರಲ್ಲ – ಶಾಸಕಿ ಲಕ್ಷ್ಮಿ‌ ಹೆಬ್ಬಾಳ್ಕರ್‌

ಹುಬ್ಬಳ್ಳಿ:  ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಯ ಸೃಷ್ಟಿ ಮಾಡಲು ಐಟಿ, ಇಡಿ ದಾಳಿ ಮಾಡಲಾಗುತ್ತಿದೆ. ಇದಕ್ಕೆಲ್ಲ ನಾವು ಹೆದರುವುದಿಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕಾರ್ಯಕರ್ತರಲ್ಲಿ ಭಯ ಸೃಷ್ಟಿ ಮಾಡಲು ರಾಜಕಾರಣ ಮಾಡುತ್ತಿದ್ದಾರೆ. ಎಲ್ಲ ರಾಜ್ಯಗಳಲ್ಲಿ ಈ ರೀತಿ ಆಗುತ್ತಿದೆ. ಇಡಿ, ಐಟಿಗೆ ನಾವು ಹೆದರುವುದಿಲ್ಲ. ಇದು ಯಾವುದು ಕೂಡ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.

ಈಗ ಐಟಿ ದಾಳಿ ಮಾಡಿರುವ ಯು.ಬಿ. ಶೆಟ್ಟಿ ಮೊದಲಿಂದಲೂ ಡಿ.ಕೆ. ಶಿವಕುಮಾರ್ ಜೊತೆ ಇದ್ದಾರೆ. ನಮ್ಮ ಕಾರ್ಯಕರ್ತರ ನೈತಿಕತೆ ಕಡಿಮೆ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಗನಿಗೆ ಬೇಲ್ ಸಿಕ್ಕ ಖುಷಿಗೆ ವಕೀಲರ ತಂಡದೊಂದಿಗೆ ಫೋಟೋಗೆ ಪೋಸ್ ಕೊಟ್ಟ ಶಾರೂಖ್ ಖಾನ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತ, ಧಾರವಾಡದ ಎ-1 ಗುತ್ತಿಗೆದಾರ, ಉದ್ಯಮಿ ಆಗಿರುವ ಯು.ಬಿ. ಶೆಟ್ಟಿಯ ಮನೆ ಮೇಲೆ ದಾಳಿಯಾಗಿದೆ. ಗೋವಾ ಮೂಲದ ಐಟಿ ಅಧಿಕಾರಿಗಳಿಂದ ಯುಬಿ ಶೆಟ್ಟಿಗೆ ಸಂಬಂಧಿಸಿದ ಧಾರವಾಡದ ಮನೆ ಮತ್ತು ಉಡುಪಿಯ ಬೈಂದೂರು ತಾಲೂಕಿನ ಸ್ವಗ್ರಾಮ ಉಪ್ಪುಂದದ ಮನೆ ಮೇಲೆ ರೇಡ್ ಆಗಿದೆ. ಇದನ್ನೂ ಓದಿ: ಡಿಕೆ ಶಿವಕುಮಾರ್ ಆಪ್ತನ ಮನೆ ಮೇಲೆ ಐಟಿ ದಾಳಿ

Comments

Leave a Reply

Your email address will not be published. Required fields are marked *