ಸ್ಯಾಂಡಲ್‍ವುಡ್‍ಗೆ ಶಾಕ್ ಕೊಡಲು ಐಟಿ ಅಧಿಕಾರಿಗಳ ಮಾಸ್ಟರ್ ಪ್ಲಾನ್ ಹೀಗಿತ್ತು!

– ಕಳೆದ ಒಂದು ವಾರದಿಂದ ದಾಳಿಗೆ ಐಟಿ ಅಧಿಕಾರಿಗಳು ಪ್ಲಾನ್
– ಅಧಿಕಾರಿಗಳಿಗೆ ನಾವು ನಟರ ಮನೆ ಹೋಗ್ತಿದ್ದೇವೆ ಅನ್ನೋದು ತಿಳಿದಿರಲಿಲ್ಲ
– ಮುಂಚಿತವಾಗಿ 150 ದೊಡ್ಡ ಪೆಟ್ಟಿಗೆಯನ್ನು ಸಿದ್ಧಪಡಿಸಿದ್ದ ಐಟಿ

ಬೆಂಗಳೂರು: ಒಂದು ವಾರದ ಹಿಂದೆ ಮಾಸ್ಟರ್ ಪ್ಲಾನ್ ಮಾಡಿ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ಬೆಳಗ್ಗೆ ಸ್ಯಾಂಡಲ್‍ವುಡ್‍ಗೆ ಶಾಕ್ ಕೊಟ್ಟಿದ್ದಾರೆ.

ಐಟಿ ಅದಿಕಾರಿಗಳು ಮೂರು ದಿನಗಳಿಂದ ನಟರು ಮತ್ತು ನಿರ್ಮಾಪಕರ ಲೊಕೇಷನ್ ಮೇಲೆ ಕಣ್ಣಿಟ್ಟಿದ್ದು, ನಟರ, ನಿರ್ಮಾಪಕರ ಆದಾಯದ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿದ್ದರು. ಅಷ್ಟೇ ಅಲ್ಲದೇ ಮೊದಲೇ ಐಟಿ ಅಧಿಕಾರಿಗಳು 50 ಕಡೆ ಏಕಕಾಲಕ್ಕೆ ದಾಳಿಗೆ ಸ್ಕೆಚ್ ಕೂಡ ಹಾಕಿದ್ದರು. ಪ್ಲಾನ್ ಪ್ರಕಾರವಾಗಿ ಇಂದು ಏಕಾಕಾಲದಲ್ಲಿ ನಟರು, ನಿರ್ಮಾಪಕರು, ಆಪ್ತರ ಮನೆ ಮೇಲೆ ದಾಳಿ ನಡೆಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಇದನ್ನೂ ಓದಿ: ಸ್ಯಾಂಡಲ್‍ವುಡ್‍ಗೆ ಐಟಿ ಶಾಕ್ ನೀಡಿದ್ದು ಯಾಕೆ? – ನಿರ್ಮಾಪಕರು, ನಟರ ಮನೆ ಮೇಲಿನ ದಾಳಿಗೆ ಕಾರಣ ಇಲ್ಲಿದೆ

ಐಟಿ ಅಧಿಕಾರಿಗಳು ಸರ್ಕಾರಿ ಕಾರನ್ನು ಬಳಸದೇ ದಾಳಿಗೆ ಬಾಡಿಗೆ ಕಾರನ್ನು ಬಳಸಿದ್ದಾರೆ. ಬೇರೆ ಬೇರೆ ಟ್ರಾವೆಲ್ ಏಜೆನ್ಸಿಗಳ ಮೂಲಕ 150 ಇನ್ನೋವಾ ಕಾರ್ ಬುಕ್ ಮಾಡಿ ಈ ದಾಳಿ ನಡೆಸಲಾಗಿದೆ. ದಾಳಿ ಹಿನ್ನೆಲೆಯಲ್ಲಿ 200 ಸಶಸ್ತ್ರ ಪಡೆ ಸ್ಟೆನ್ ಗನ್ ಸಮೇತ ಬರುವಂತೆ ಪೊಲೀಸರಿಗೆ ಮೊದಲೇ ಸೂಚನೆ ನೀಡಲಾಗಿತ್ತು. ನಟರ ಮನೆಯ ಮೇಲೆ ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಆಗಮಿಸಿ ಅಹಿತಕರ ಘಟನೆ ನಡೆದರೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರವನ್ನು ಅಧಿಕಾರಿಗಳು ತೆಗೆದುಕೊಂಡಿದ್ದರು. ಇದನ್ನೂ ಓದಿ: ಸ್ಯಾಂಡಲ್‍ವುಡ್ ಇತಿಹಾಸದಲ್ಲಿ ಅತಿ ದೊಡ್ಡ ಐಟಿ ದಾಳಿ – ಯಾರ ಮನೆ ಮೇಲೆ ದಾಳಿ ನಡೆದಿದೆ?

ಅಧಿಕಾರಿಗಳಿಗೆ ತಿಳಿದಿರಲಿಲ್ಲ:
ನಟರು ಮತ್ತು ನಿರ್ಮಾಪಕರ ಮನೆ ಮೇಲಿನ ದಾಳಿ ನಡೆಸುವ ಬಗ್ಗೆ ಅಧಿಕಾರಿಗಳಿಗೂ ತಿಳಿದಿರಲಿಲ್ಲ. ಆದರೆ ದಾಳಿಗೆ 200ಕ್ಕೂ ಹೆಚ್ಚು ಅಧಿಕಾರಿಗಳನ್ನು ಸಜ್ಜು ಮಾಡಿದ್ದರು. ಅವರನ್ನು ಐಟಿ ಕಚೇರಿ ಇರುವ ಕ್ವೀನ್ಸ್ ರಸ್ತೆಗೆ ಬರುವಂತೆ ಸೂಚಿಸಿದ್ದರು.

ಕೆಲ ನಿರ್ಮಾಪಕರು ಚಾರ್ಟೆಡ್ ಅಕೌಂಟ್‍ಗಳೊಂದಿಗೆ ಸಂಪರ್ಕದಲ್ಲಿರುವ ಸಂಶಯದಿಂದ ಹಿರಿಯ ಐಟಿ ಅಧಿಕಾರಿಗಳು ಮಾಹಿತಿ ಬಿಟ್ಟಕೊಟ್ಟಿರಲಿಲ್ಲ. ಆದರೆ ನಾಳೆ ಬೆಳಗ್ಗೆ ದಾಳಿ ಇದ್ದರೆ ಇರುತ್ತದೆ. ಇಲ್ಲ ಅಂದರೆ ಇಲ್ಲ ಅಂತಲೂ ಹೇಳಿದ್ದರು. ಮೆಸೇಜ್ ಕಳುಹಿಸಿದ 30 ನಿಮಿಷದಲ್ಲಿ ಕಚೇರಿಗೆ ಬರುವಂತೆ ಸೂಚಿಸಿದ್ದರು.

ಅದರಂತೆಯೇ ಬೆಳಗ್ಗೆ 4.30ಕ್ಕೆ ಅಧಿಕಾರಿಗಳಿಗೆ ಮೆಸೇಜ್ ಕಳುಹಿಸಿದ್ದಾರೆ. ಮೆಸೇಜ್ ಬಂದ ತಕ್ಷಣ ಅವರು ಹೇಳಿದ್ದ ಸ್ಥಳಕ್ಕೆ ಬಂದಿದ್ದರು. ಬಳಿಕ ಅವರಿಗೆ ಸೀಲ್ಡ್ ಕವರ್ ನಲ್ಲಿ ಸ್ಥಳ ನಿಯೋಜನೆ ಮಾಹಿತಿ ನೀಡಿ ಕಳುಹಿಸಿದ್ದರು. ಪಿನ್ ಲೊಕೇಷನ್ ನೋಡಿ ದಾಳಿ ಮಾಡುವಂತೆ ಅಧಿಕಾರಿಗಳಿಗೆ ಇಲಾಖೆ ಸೂಚಿಸಿತ್ತು. ಅಷ್ಟೇ ಅಲ್ಲದೇ ಮುಂಚಿತವಾಗಿ 150 ದೊಡ್ಡ ಪೆಟ್ಟಿಗೆಗಳೊಂದಿಗೆ ಅಧಿಕಾರಿಗಳ ತಂಡ ಸಜ್ಜಾಗಿತ್ತು. ಯಾಕೆಂದರೆ ದಾಳಿಯಲ್ಲಿ ವಶಪಡಿಸಿಕೊಳ್ಳುವ ಆಸ್ತಿ ಪತ್ರ ತರಲು ಪೆಟ್ಟಿಗೆಗಳನ್ನು ಸಿದ್ಧಪಡಿಸಲಾಗಿತ್ತು ಎನ್ನುವ ವಿಚಾರ ಮೂಲಗಳಿಂದ ಸಿಕ್ಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *