ಇಟ್ ಇಸ್ ವೆರಿ ಚೀಪ್ ವೇ ಆಫ್ ಥಿಂಕಿಂಗ್ ಅನ್ಸುತ್ತೆ: ಸಿಎಂ ಸೈನಿಕರ ಹೇಳಿಕೆಗೆ ಯಶ್ ಮಾತು

ಮಂಡ್ಯ: ತಿನ್ನೋಕೆ ಅನ್ನ ಇಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ರಾಕಿಂಗ್ ಸ್ಟಾರ್ ಯಶ್ ಇಟ್ ಇಸ್ ವೆರಿ ಚೀಪ್ ವೇ ಆಫ್ ಥಿಂಕಿಂಗ್ ಅನ್ಸುತ್ತೆ ಎಂದು ಪ್ರತಿಕ್ರಿಯಿಸಿದ್ದಾರೆ.

ತಿನ್ನೋಕೆ ಅನ್ನ ಇಲ್ಲ ಎಂದು ಎಲ್ಲಾರೂ ಸೈನ್ಯಕ್ಕೆ ಸೇರಲ್ಲ. ಇಟ್ ಇಸ್ ವೆರಿ ಚೀಪ್ ವೇ ಆಫ್ ಥಿಂಕಿಂಗ್ ಅನ್ನುತ್ತೆ. ಅನ್ನ ಅಲ್ಲ ಅವರು ದೇಶದ ಮೇಲಿನ ಭಕ್ತಿ ಹಾಗೂ ಅಭಿಮಾನದಿಂದ ಸೈನ್ಯಕ್ಕೆ ಸೇರುತ್ತಾರೆ. ಅವರ ಮನೆ ಪರಿಸ್ಥಿತಿ ಹೇಗಿದೆ ಎಂಬುವುದು ಅಲ್ಲಿ ಮುಖ್ಯವಾಗುವುದಿಲ್ಲ. ಅವರು ನಮ್ಮ ಮನೆ ಕಾಯುವುದಕ್ಕೆ ಅಲ್ಲಿ ಹೋಗಿರುತ್ತಾರೆ ಎಂದರು.

ನಮ್ಮ ಕುಟುಂಬದಲ್ಲೂ ಸೈನ್ಯಕ್ಕೆ ಹೋಗಿದ್ದಾರೆ. ಆದರೆ ಅವರು ತಿನ್ನುವುದಕ್ಕೆ ಅನ್ನ ಇಲ್ಲ ಎಂದು ಹೋಗಿಲ್ಲ. ಅಭಿಮಾನದಿಂದ ಕೆಲಸ ಮಾಡಲು ಹೋಗಿದ್ದಾರೆ. ಕೆಲವೊಬ್ಬರು ಮೊದಲಿನಿಂದಲೂ ಆ ಪ್ಯಾಶನ್ ಇಟ್ಟುಕೊಂಡು ಕೆಲಸ ಮಾಡುತ್ತಾರೆ. ಎಂಜಿನಿಯರ್ಸ್ ಕೂಡ ಕೆಲಸ ಮಾಡುತ್ತಾರೆ. ಎಲ್ಲ ವೃತ್ತಿಯಲ್ಲಿ ಇರುವವರು ಕೂಡ ಸೈನ್ಯಕ್ಕೆ ಹೋಗಿ ಕೆಲಸ ಮಾಡುತ್ತಿದ್ದಾರೆ. ತಿನ್ನೋಕ್ಕೆ ಗತಿಯಿಲ್ಲ ಎಂದು ಸೈನ್ಯಕ್ಕೆ ಸೇರುತ್ತಾರೆ ಎಂಬ ಮಾತು ಸರಿಯಲ್ಲ. ಅವರಿಗೆ ಅನ್ನ ಗತಿಯಿಲ್ಲ ಎಂದು ಸೈನ್ಯಕ್ಕೆ ಸೇರಿದ್ದಾರೆ ಅಂದ್ರೆ ಅವರಿಗೆ ದೇಶ ಅಭಿಮಾನ ಇಲ್ಲ ಎಂದು ಅರ್ಥನಾ ಎಂದು ಯಶ್ ಪ್ರಶ್ನಿಸಿದ್ದಾರೆ.

ನನಗೆ ದೇಶಾಭಿಮಾನ ಇದೆ. ನನ್ನ ದೇಶದ ಸೈನಿಕರು ಅಭಿಮಾನದಿಂದ ಹೋಗಿದ್ದಾರೆ ಎಂದು ನಾನು ನಂಬುತ್ತೇನೆ. ಏಕೆಂದರೆ ನಾನು ನೆಮ್ಮದಿಯಾಗಿ ನಿದ್ದೆ ಮಾಡುತ್ತೇನೆ. ಹೊಟ್ಟೆಪಾಡಿಗೆ ಹೋಗಿದ್ದಾರೆ ಎಂದರೆ ಬೇರೆ. ಏಕೆಂದರೆ ಹೊಟ್ಟೆಪಾಡಿಗೆ ಅಂದರೆ ಸಂಬಳಕ್ಕಾಗಿ ಹೋಗುವುದು. ಸಂಬಳಕ್ಕಾಗಿ ಹೋಗುವುದು ಬೇರೆ. ಅಭಿಮಾನದಿಂದ ಹೋಗುವುದು ಬೇರೆ. ಅವರು ಅಲ್ಲಿ ನಿದ್ದೆಗೆಟ್ಟು ಕೆಲಸ ಮಾಡುತ್ತಾರೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *