ಅನೈತಿಕ ಸಂಬಂಧ ಶಂಕೆ: ಪೋಷಕರೊಂದಿಗೆ ಸೇರಿ ಪತ್ನಿಗೆ ಬೆಂಕಿ ಇಟ್ಟ ಪತಿ!

ಕಲಬುರಗಿ: ಅನೈತಿಕ ಸಂಬಂಧ ಶಂಕೆ ವ್ಯಕ್ತವಾಗಿದಕ್ಕೆ ಪೋಷಕರ ಜೊತೆ ಸೇರಿ ಪತಿಯೇ ಪತ್ನಿಗೆ ಬೆಂಕಿ ಹಚ್ಚಿದ ಅಮಾನವೀಯ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಕೂಡಲಹಂಗರಗಾ ಗ್ರಾಮದಲ್ಲಿ ನಡೆದಿದೆ.

ಶಾರದಾಬಾಯಿ (20) ಸಾವು ಬದುಕಿನ ಹೋರಾಡುತ್ತಿರುವ ಪತ್ನಿ. ಶಾರದಾರ ಮುಖ ಸೇರಿದಂತೆ ದೇಹದ ಬಹುತೇಕ ಭಾಗ ಬೆಂಕಿಯಿಂದ ಸುಟ್ಟಿದೆ. ವೀರಣ್ಣ ಬೆಂಕಿ ಹಚ್ಚಿದ ಪತಿ.

ಒಂದು ವರ್ಷದ ಹಿಂದೆ ಶಾರದಾಬಾಯಿ ಕೊಡಲಹಂಗರಗಾ ಗ್ರಾಮದ ವೀರಣ್ಣ ಜೊತೆ ವಿವಾಹವಾಗಿತ್ತು. ವೀರಣ್ಣ ಕೃಷಿಕನಾಗಿ ಕೆಲಸ ಮಾಡಿಕೊಂಡಿದ್ದನು. ಸಂಶಯ ಸ್ವಭಾವದವನಾಗಿದ್ದ ಪತಿ ವೀರಣ್ಣ, ನಿನ್ನ ನಡೆತೆ ಸರಿಯಾಗಿಲ್ಲ ಅಂತಾ ವಿನಾಕಾರಣ ಜಗಳ ಮಾಡುತ್ತಿದ್ದನು. ಶುಕ್ರವಾರ ಬೆಳಗ್ಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಕೃತ್ಯ ಎಸಗಲು ವೀರಣ್ಣನ ತಾಯಿ ನೀಲಮ್ಮ ಹಾಗೂ ತಂದೆ ಗುಂಡಪ್ಪ ಸಹಾಯ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕೃತ್ಯದ ಬಳಿಕ ಶಾರದಾಬಾಯಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ವೀರಣ್ಣ ಪರಾರಿಯಾಗಿದ್ದಾನೆ. ಶಾರದಾಬಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *