ಹುಬ್ಬಳ್ಳಿ-ಧಾರವಾಡ ಡಿಸಿಪಿ ಆಗಿ ಅಧಿಕಾರ ವಹಿಸಿಕೊಂಡ ಕೃಷ್ಣಕಾಂತ್

ಹುಬ್ಬಳ್ಳಿ: ಜಿಲ್ಲಯಲ್ಲಿ ಖಾಲಿ ಉಳಿದಿದ್ದ ಡಿಸಿಪಿ ಸ್ಥಾನಕ್ಕೆ ನೂತನ ಅಧಿಕಾರಿಗಳಾಗಿ ಐಪಿಎಸ್ ಪಿ. ಕೃಷ್ಣಕಾಂತ್ ನೇಮಕಗೊಂಡಿದ್ದಾರೆ.

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಕಮೀಷನರ್ ಹಾಗೂ ಡಿಸಿಪಿಗಳ ಮಧ್ಯೆ ನಡೆದ ಜಟಾಪಟಿ ಸಾಕಷ್ಟು ಸುದ್ದಿಯಾಗಿತ್ತು. ಪೊಲೀಸ್ ಆಯುಕ್ತರು ಹಾಗೂ ಕೆಳ ಸಿಬ್ಬಂದಿ ಮಧ್ಯೆ ನಡೆದ ಜಗಳದ ನಂತರ ಡಿಸಿಪಿ ನಾಗೇಶ್ ವರ್ಗಾವಣೆ ಸಹ ಆಗಿದ್ದರು. ನಾಗೇಶ್ ವರ್ಗಾವಣೆ ನಂತರ ಐಪಿಎಸ್ ಪಿ. ಕೃಷ್ಣಕಾಂತ್ ಅವರು ಖಾಲಿಯಾಗಿದ್ದ ಡಿಸಿಪಿ ಸ್ಥಾನದ ಅಧಿಕಾರ ವಹಿಸಿಕೊಂಡಿದ್ದಾರೆ.

ಸಿ.ಐ.ಡಿ ಬೆಂಗಳೂರು ಘಟಕದಲ್ಲಿ ಪೊಲೀಸ್ ಅಧೀಕ್ಷಕರಾಗಿ ಕೃಷ್ಣಕಾಂತ್ ಅವರು ಸೇವೆ ಸಲ್ಲಿಸುತ್ತಿದ್ದರು. ಅವರನ್ನು ಅಲ್ಲಿಂದ ಬೆಂಗಳೂರಿನ ಡಿ.ಜಿ ಮತ್ತು ಐ.ಜಿ.ಪಿ ಅವರು ಉಪ ಪೊಲೀಸ್ ಆಯುಕ್ತರು(ಕಾನೂನು ಮತ್ತು ಸುವ್ಯವಸ್ಥೆ) ಹುಬ್ಬಳ್ಳಿ-ಧಾರವಾಡ ಹುದ್ದೆಗೆ ಹೆಚ್ಚುವರಿ ಪ್ರಭಾರದಲ್ಲಿರಿಸಿ ವರ್ಗಾವಣೆ ಮಾಡಿದ್ದಾರೆ.

ಹೀಗಾಗಿ ಕೃಷ್ಣಕಾಂತ್ ಅವರು ಹುಬ್ಬಳ್ಳಿ-ಧಾರವಾಡ ಉಪ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಉಪ ಆಯುಕ್ತರಿಗೆ ಹೆಚ್ಚುವರಿ ಪ್ರಭಾರ ವಹಿಸಿ ಪೊಲೀಸ್ ಆಯುಕ್ತ ಆರ್. ದಿಲೀಪ್ ಸ್ವಾಗತಿಸಿದ್ದಾರೆ.

Comments

Leave a Reply

Your email address will not be published. Required fields are marked *