ಐಪಿಎಲ್ ಟ್ರೋಫಿ ಮೇಲಿದೆ ಸಂಸ್ಕೃತ ವಾಕ್ಯ: ಅರ್ಥ ಏನು? ಕಪ್ ವಿಶೇಷತೆ ಏನು?

ಮುಂಬೈ: ದೇಶಿಯ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಭಾಷ್ಯ ಬರೆಯುತ್ತಿರುವ ಐಪಿಎಲ್ ಹೊಸ ಪ್ರತಿಭೆಗಳು ತಮ್ಮ ಸಾಮರ್ಥ್ರ್ಯವನ್ನು ಸಾಬೀತು ಪಡಿಸಿಕೊಳ್ಳುವ ವೇದಿಕೆಯಾಗಿದೆ. ಇದರೊಂದಿಗೆ ಆಕರ್ಷಕ ಟ್ರೋಫಿಯನ್ನು ಹೊಂದಿದ್ದು, ಟ್ರೋಫಿಯ ಕುರಿತ ವಿಶೇಷ ಮಾಹಿತಿ ಇಲ್ಲಿದೆ.

ಟೂರ್ನಿಯಲ್ಲಿ ಯಶಸ್ವಿ ಪ್ರದರ್ಶನ ನೀಡುವ ತಂಡಕ್ಕೆ ನೀಡುವ ಟ್ರೋಫಿಯು ವಿಶೇಷ ಆಕರ್ಷಣೆಯನ್ನು ಹೊಂದಿದೆ. ಇದರ ಮೇಲೆ ಸಂಸ್ಕೃತದಲ್ಲಿ “ಯಾತ್ರ ಪ್ರತಿಭಾ ಅವಸರ ಪ್ರಾಪ್ನೋತಿಹಿ” ಎಂದು ಬರೆಯಲಾಗಿದ್ದು, ಪ್ರತಿಭೆಗಳ ಅವಕಾಶಕ್ಕೆ ತಕ್ಕ ವೇದಿಕೆ ಎಂಬರ್ಥವನ್ನು ನೀಡುತ್ತದೆ. ಸ್ವರ್ಣ ಲೇಪಿತ ದಿಂದ ನಿರ್ಮಾಣವಾಗಿರುವ ಕಪ್ ಮೇಲಿನ ಅಕ್ಷರಗಳು ಬರಿಗಣ್ಣಿಗೆ ಗೋಚರಿಸುವುದಿಲ್ಲ ಎಂಬುದು ಇದರ ಮತ್ತೊಂದು ವಿಶೇಷವಾಗಿದೆ.

ಟೂರ್ನಿಯಲ್ಲಿ ಭಾಗವಹಿಸುವ ತಂಡದ ಎಲ್ಲರೂ ಕಪ್ ಗೆಲ್ಲಲು ಒಟ್ಟಾಗಿ ಶ್ರಮವಹಿಸುತ್ತಾರೆ. ಬಳಿಕ ಒಂದು ವರ್ಷದ ಅವಧಿ ಅಂದರೆ ಮುಂದಿನ ಟೂರ್ನಿ ಆರಂಭವಾಗುವ ವರೆಗೂ ಟ್ರೋಫಿ ವಿಜೇತ ತಂಡದಲ್ಲಿರುತ್ತದೆ.

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ಬದಲಾವಣೆ ತಂದ ಐಪಿಎಲ್ ಟೂರ್ನಿ ದೇಶದ ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ರ್ಯವನ್ನು ಪ್ರದರ್ಶಿಸುವ ಪ್ರಮುಖ ವೇದಿಕೆಯಾಗಿದೆ. ಮೇ 27 ರಂದು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ 2018 ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.

Comments

Leave a Reply

Your email address will not be published. Required fields are marked *