ವಿಶ್ವ ಮಹಿಳಾ ದಿನಾಚರಣೆ – ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕರಿಗೆ ಗೌರವ

ಬೆಂಗಳೂರು: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಟಿ.ದಾಸರಹಳ್ಳಿಯ ಪೀಣ್ಯ ಕೈಗಾರಿಕಾ ಪ್ರದೇಶದ ಗೋಕಲ್ ದಾಸ್ ಎಕ್ಸ್ ಪ್ರೋರ್ಟ್ಸ್ ಲಿಮಿಟೆಡ್ ಕಂಪನಿಯಲ್ಲಿ ಹಿರಿಯ ಪರಿಸರವಾದಿ, ವಿಶ್ವದ ಪ್ರಭಾವಿ ಮಹಿಳೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಸಾಲುಮರದ ತಿಮ್ಮಕ್ಕ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

 Saalumarada Thimmakka

ಈ ವೇಳೆ ಮಾತನಾಡಿದ ಸಾಲುಮರದ ತಿಮ್ಮಕ್ಕನವರು ಮಹಿಳಾ ಸಾಧಕಿಯರನ್ನು ನೆನೆದು ಎಲ್ಲಾ ಮಹಿಳೆಯರು ಒಂದಲ್ಲಾ ಒಂದು ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುವಂತವರಾಗಿ ಎಂದು ಶುಭಹಾರೈಸಿದರು. ತಮ್ಮ ಕುಟುಂಬ ಮತ್ತು ಮಕ್ಕಳ ಲಾಲನೆ, ಪಾಲನೆ ಮಾಡುತ್ತಾ ಬಂದಿರುವ ಮಹಿಳಾಯರನ್ನು ಕೊಂಡಾಡಿದರು. ಉತ್ತಮ ಪರಿಸರಕ್ಕಾಗಿ ಎಲ್ಲರು ಪರಿಸರ ಕಾಳಜಿಯಿಂದ ಒಂದೊಂದು ಗಿಡ ನೆಟ್ಟು ಪರಿಸರ ಬೆಳಸಿ ಉಳಿಸಿ ಎಂದರು. ಇದನ್ನೂ ಓದಿ: ಯುಪಿ ಚುನಾವಣಾ ಫಲಿತಾಂಶ ನಮಗೊಂದು ಪಾಠ: ಮಾಯಾವತಿ

ಗೋಕಲ್ ದಾಸ್ ಎಕ್ಸ್ ಪ್ರೋರ್ಟ್ಸ್ ಲಿಮಿಟೆಡ್ ಇಸಿಸಿ ಘಟಕದ ಉಪಾಧ್ಯಕ್ಷ ಕೇಶವ ಹಾಗೂ ಸೀನಿಯರ್ ಜನರಲ್ ಮ್ಯಾನೇಜರ್ ಹೆಚ್.ಆರ್.ಮಲ್ಲಿಕಾರ್ಜುನ ಅವರು ಮಾತನಾಡಿ, ಈ ಇಳಿ ವಯಸ್ಸಿನಲ್ಲಿ ತಿಮ್ಮಕ್ಕನವರ ಪರಿಸರದ ಕಾಳಜಿ ಹುಮ್ಮಸ್ಸು. ಒಂದೆಲ್ಲಾ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರಣೆಯಾಗಿದೆ. ಅವರ ಅಪಾರ ಶ್ರಮ ಮತ್ತು ಸಾಧನೆಯನ್ನು ಹಂಚಿಕೊಂಡರು.

 Saalumarada Thimmakka

ಈ ಕಾರ್ಯಕ್ರಮದಲ್ಲಿ ವಿಶ್ವದ ಪ್ರಭಾವಿ ಮಹಿಳೆ ಸಾಲುಮರದ ತಿಮ್ಮಕ್ಕ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಪ್ರೊಡಕ್ಷನ್ ಮ್ಯಾನೇಜರ್ ರಾಜು, ಹರೀಶ್, ಕಾರ್ಮಿಕ ಕಲ್ಯಾಣಾಧಿಕಾರಿ ರಜನಿ, ವರಲಕ್ಷ್ಮಿ, ಅಜಿತ್, ಸಿಬ್ಬಂದಿ ಉಪಸ್ಥಿತರಿದ್ದರು. ಇದನ್ನೂ ಓದಿ: Bulldozer is Back – ಟ್ರೆಂಡ್‌ ಆಯ್ತು ಬುಲ್ಡೋಜರ್‌, ಬುಲ್ಡೋಜರ್‌ ಏರಿ ಬಿಜೆಪಿಯಿಂದ ಸಂಭ್ರಮಾಚರಣೆ

Comments

Leave a Reply

Your email address will not be published. Required fields are marked *