ನಿತೀಶ್ ಕುಮಾರ್ ಹೊಟ್ಟೆಗೆ ಗಾಯ – ನೀಲಮ್ ದೇವಿ ಪರ ಪ್ರಚಾರಕ್ಕೆ ಗೈರು ಸಾಧ್ಯತೆ

ಪಾಟ್ನಾ: ಮುಂಬರುವ ಉಪಚುನಾವಣೆಯಲ್ಲಿ (By-elections) ಆರ್‌ಜೆಡಿ (RJD) ಅಭ್ಯರ್ಥಿ ನೀಲಮ್ ದೇವಿ ಪರ ಅಕ್ಟೋಬರ್ 27 ರಂದು ಮೊಕಾಮಾದಲ್ಲಿ ಪ್ರಚಾರ ನಡೆಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar Chief Minister Nitish Kumar) ಗೈರಾಗಬಹುದು.

ಅಕ್ಟೋಬರ್ 15 ರಂದು ಛತ್ ಪೂಜೆ (Chhath Puja) ಆಚರಣೆ ಕುರಿತಂತೆ ಗಂಗಾ ಘಾಟ್‍ನಲ್ಲಿ (Ganga Ghats) ಪರಿಶೀಲನೆ ನಡೆಸುತ್ತಿದ್ದಾಗ ನಿತೀಶ್ ಕುಮಾರ್ ಅವರ ಹೊಟ್ಟೆ ಮೇಲೆ ಗಾಯವಾಗಿರುವುದನ್ನು ತೋರಿಸಿದ್ದರು. ಹೀಗಾಗಿ ನವೆಂಬರ್ 3 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಆರ್‌ಜೆಡಿ ಅಭ್ಯರ್ಥಿ ನೀಲಮ್ ದೇವಿ (Neelam Devi ) ಪರ ಪ್ರಚಾರ ನಡೆಸಲು ಗೈರಾಗಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ಡೀಲ್ ಮುಗಿಯುವ ಮುನ್ನವೇ ಟ್ವಿಟ್ಟರ್ ಚೀಫ್ ಎಂದು ಘೋಷಿಸಿಕೊಂಡ ಮಸ್ಕ್

ಗಂಗಾ ಘಾಟ್ ಅನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ಗಂಗಾ ನದಿಯ ಸೇತುವೆಗೆ ಹಡುಗು ಡಿಕ್ಕಿ ಹೊಡೆದಿದ್ದು, ಈ ವೇಳೆ ನಿತೀಶ್ ಹೊಟ್ಟೆ ಮತ್ತು ಪಾದಕ್ಕೆ ಗಾಯಗೊಂಡಿದ್ದರು. ನಂತರ ಈ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ನಿತೀಶ್ ಕುಮಾರ್ ಅವರು, ನನ್ನ ಹೊಟ್ಟೆಗೆ ಗಾಯವಾಗಿರುವಿದರಿಂದ ಸೀಟ್ ಬೆಲ್ಟ್ ಧರಿಸಲು ಸಾಧ್ಯವಾಗದೇ, ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳಲಾಗುತ್ತಿಲ್ಲ ಎಂದು ಹೇಳಿದ್ದರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *